ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಸ್ಟ್ ಮಿಸ್….!!!

ಬೆಳಗಾವಿ- ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪತ್ನಿ ಸಮೇತ ಡೆಹ್ರಾಡೂನ್ ಗೆ ಹೋಗಿದ್ರು, ಅಲ್ಲಿ ಮೀಟೀಂಗ್ ಮುಗಿಸಿ ಒಟ್ಟು ಎಂಟು ಜನ ಸಂಸದರು ತಮ್ಮ ಕುಟುಂಬದ ಜೊತೆ ಹೆಲಿಕಾಪ್ಟರ್ ನಲ್ಲಿ ಕೇದಾರನಾಥಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ರು ಹೆಲಿಕಾಪ್ಟರ್ ಪಾಯಿಂಟ್ ಗೆ ಹೋಗಲು ಇವರಿಗೆ ತಡವಾಯ್ತು, ಹೆಲಿಕಾಪ್ಟರ್ ಮ್ಯಾನೇಜ್ ಮಾಡುವವರು ಸಂಸದರು ಬರುವವರೆಗೆ ಬೇರೆ ಯಾತ್ರಾರ್ಥಿಗಳನ್ಬು ಶಿಪ್ಟ್ ಮಾಡೋಣ ಅಂತ ಹೆಲಿಕಾಪ್ಟರ್ ಹಾರಿಸಿದ್ರು ಅದೇ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುವಾಗ ಕ್ರ್ಯಾಶ್ ಆಗಿ ಏಳು ಜನ ಮೃತಪಟ್ಟರು

ಎಂಟು ಜನ ಸಂಸದರು ಸಮಯಕ್ಕೆ ಸರಿಯಾಗಿ ಬಂದಿದ್ರೆ ಕ್ರ್ಯಾಶ್ ಆದ ಹೆಲಿಕಾಪ್ಟರ್ ನಲ್ಲಿ ಅವರೇ ಪ್ರಯಾಣ ಮಾಡ್ತಾ ಇದ್ರು ಆದ್ರೆ ಅವರು ತಡವಾಗಿ ಹೋಗಿದ್ದರಿಂದ ಬೇರೆ ಹೆಲಿಕಾಪ್ಟರ್ ನಲ್ಲಿ ಈರಣ್ಣಾ ಕಡಾಡಿ ಸೇರಿದಂತೆ ಇನ್ನುಳಿದವರು ಕುಳಿತಿರುವಾಅಗಕೇ ಮೊದಲು ಹಾರಿ ಹೋಗಿದ್ದ ಹೆಲಿಕಾಪ್ಟರ್ ಕ್ರ್ಯಾಶ್ ಆಗಿರುವ ಸುದ್ದಿ ಬಂತು ಹೆಲಿಕಾಪ್ಟರ್ ನಲ್ಲಿ ಕುಳಿತುಕೊಂಡಿದ್ದ ಎಂಟು ಜನ ಸಂಸದರ ಕುಟುಂಬಸ್ಥರನ್ಬು ಹೆಲಿಕಾಪ್ಟರ್ ನಿಂದ ಕೆಳಗಿಳಿಸಿ ಹೆಲಿಕಾಪ್ಟರ್ ಹಾರಾಟವನ್ನು ರದ್ದು ಮಾಡಲಾಯಿತು.ಹೆಲಿಕಾಪ್ಟರ್ ದುರಂತದಿಂದ ದೇಶದ ಎಂಟು ಸಂಸದರು, ಕುಟುಂಬಸ್ಥರು ಜಸ್ಟ್ ಮಿಸ್ ಆದ್ರು.

ಮೊದಲ ಬ್ಯಾಚ್‌ನಲ್ಲಿ ಹೆಲಿಕಾಪ್ಟರ್ ಮೂಲಕ ಕೇದರನಾಥ್‌ಗೆ ತೆರಳಬೇಕಿದ್ದ ಸಂಸದರು.ಡೆಹ್ರಾಡೂನ್‌ನಿಂದ ಕೆದರನಾಥಗೆ ತೆರಳಲು ಎಂಟು ಸಂಸದರಿಗೆ ನಿನ್ನೆ ಬೆಳಗ್ಗೆ 6ಕ್ಕೆ ಸೆಡ್ಯುಲ್ ಫಿಕ್ಸ್ ಆಗಿತ್ತು ,ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರ ಪತ್ನಿ ಸುಮಿತ್ರಾ ಕಡಾಡಿ ಸೇರಿ 8 ಸಂಸದರು, ಕುಟುಂಬಸ್ಥರು ಪ್ರಯಾಣ ಮಾಡಬೇಕಿತ್ತು, ಆದ್ರೆ ಅವರು ತಡವಾಗಿ ಹೋಗಿದ್ದರಿಂದ ಅವರು ದುರಂತದಿಂದ ಬಚಾವ್ ಆದ್ರು.

ಮಹಾರಾಷ್ಟ್ರ ರಾಜ್ಯದ ಮಾವಲ್ ಕ್ಷೇತ್ರದ ಶಿವಸೇನೆ ಸಂಸದ ಶ್ರೀರಂಗ ಅಪ್ಪಾ ಬಾರ್ನೆ ಹಾಗೂ ಅವರ ಪತ್ನಿ ,ಉತ್ತರ ಪ್ರದೇಶದ ಆಲಿಘಡ ಕ್ಷೇತ್ರದ ಬಿಜೆಪಿ ಸಂಸದ ಸತೀಶ್ ಗೌತಂ ಹಾಗೂ ಅವರ ಪತ್ನಿ,ಮಹಾರಾಷ್ಟ್ರ ಧಾರಸಿಂಹ ಕ್ಷೇತ್ರದ ಶಿವಸೇನೆ ಸಂಸದ ಓಂಪ್ರಕಾಶ ನಿಂಬಾಳ್ಕರ್ ಹಾಗೂ ಪತ್ನಿ,ಉತ್ತರ ಪ್ರದೇಶದ ರಾಜ್ಯಸಭೆ ಸದಸ್ಯೆ ಸಂಗೀತಾ ಯಾದವ್ ಹಾಗೂ ಅವರ ಪತಿ,ಈ ಎಲ್ಲರೂ ಭಾನುವಾರ ಬೆಳಗ್ಗೆ ಡೆಹ್ರಾಡೂನ್‌ನಿಂದ ಕೆದರನಾಥಗೆ ಪ್ರಯಾಣಕ್ಕೆ ಪ್ಲ್ಯಾನ್ ಮಾಡಿದ್ರು,ಸಂಸದರು ಹಾಗೂ ಅವರ ಕುಟುಂಬಸ್ಥರಿಗೆ ಮೀಸಲಾಗಿತ್ತು ಮೊದಲ ಬ್ಯಾಚ್,ಈ ಎಲ್ಲರೂ ಬರುವುದು ವಿಳಂಬ ಆಗಿದಕ್ಕೆ ಸಾಮಾನ್ಯ ಯಾತ್ರಾರ್ಥಿಗಳನ್ನು ಕರೆದೊಯ್ದಿದ್ದ ಹೆಲಿಕಾಪ್ಟರ್ ದುರಂತಕ್ಕೀಡಾಯಿತು.

Check Also

ಬೆಳಗಾವಿಯಲ್ಲಿ ಯುವಕನಿಗೆ ಚಾಕು ಇರಿತ.

ಬೆಳಗಾವಿ -ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತವಾದ ಘಟನೆ ಬೆಳಗಾವಿಯ ಕಣಬರ್ಗಿ ಪ್ರದೇಶದಲ್ಲಿ ನಡೆದಿದೆ. ನಾಳೆ ತಂಗಿ ಮದುವೆ …

Leave a Reply

Your email address will not be published. Required fields are marked *