Breaking News

ಕುಡಚಿ-ಉಗಾರ, ಚಿಂಚಲಿ-ಭಿರಡಿ, ಸೆತುವೆಗಳು ಜಲಾವೃತ

ಮಹಾರಾಷ್ಟ್ರದ ಕೊಂಕಣ ತೀರದಲ್ಲಿ ಹಾಗೂ ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದರಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ಹೀಗಾಗಿ ನದಿಯ ನೀರಿನ ಮಟ್ಟ ಹೆಚ್ಚಳಗೊಂಡು ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಿಕೊಡುವ ಕುಡಚಿ-ಉಗಾರ, ಚಿಂಚಲಿ-ಭಿರಡಿ, ಸೆತುವೆಗಳು ಜಲಾವೃತಗೋಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ.
ಕೃಷ್ಣಾ ನದಿಯ ಒಳ ಹರಿಯು ಹೆಚ್ಚಾಗಿದ್ದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಬೀತಿಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ನೀಧಾನ ಗತಿಯಲ್ಲಿ ಏರಿಕೆಯಾಗುತ್ತಿದು ಸಾಯಂಕಾಲ ನದಿ ಏರಿಕೆಯ ಪ್ರಮಾಣದಲ್ಲಿ ಹೇಚ್ಚಳವಾಗಿದೆ. ಇದೇ ರೀತಿ ಹೇಚ್ಚಾದರೆ ಶುಕ್ರವಾರ ತಡರಾತ್ರಿ ಚಿಂಚಲಿ-ರಾಯಬಾಗ ಸೇತುವೆ ಮುಳುಗಡೆ ಸಾಧ್ಯತೆ ಇದೆ ಎನ್ನಲಾಗಿದೆ.
ಮಾರ್ಗ ಬದಲಾವಣೆ: ಕುಡಚಿ ರಸ್ತೆ ಸಂಚಾರ ಸ್ಥಗಿತ ಗೊಂಡಿದ್ದರಿಂದಾಗಿ ಬಾಗಲಕೋಟ, ಬಿಜಾಪೂರ, ಜಮಖಂಡಿ, ಗೋಕಾಕ ಕಡೆಗಳಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್ಸು ಹಾಗೂ ವಾಹನಗಳು ಅಥಣಿ ಮಾರ್ಗವಾಗಿ ಸಂಚರಿಸುತ್ತವೆ.
ಕೃಷ್ಣಾ ನದಿಯ ಪ್ರವಾಹ ಮಟ್ಟ ಹೆಚ್ಚುತ್ತಿದ್ದು ಸೇತುವೆ ಮುಳುಗಡೆಯಾದರು ಕೇಲವರು ದು:ಸಾಹಸಕ್ಕೆ ಮುಂದಾಗಿ ಜಲಾವೃತ ಸೇತುವೆ ಮೇಲೆಯೇ ವಾಹನ ಚಲಾಯಿಸುತ್ತಿದ್ದಾರೆ, ಅಲ್ಲದೇ ಇನ್ನು ಚಿಕ್ಕ ಮಕ್ಕಳು ಸೇರಿದಂತೆ ದೊಡ್ಡವರು ನದಿಯಲ್ಲಿ ಹೋಗುತ್ತಿದ್ದಾರೆ. ಇದು ಅಪಾಯಕರ ಸಂಗತಿಯಾಗಿದೆ. ಕಾರಣ ಜಲಾವೃತಗೊಂಡಿರುವ ಸೇತುವೆಗಳ ಬಳಿ ಪೋಲಿಸ್‍ರನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *