ಕರದಂಟಿನ ನಾಡಿನಲ್ಲಿ ನಾಳೆ ಹೈ ವೋಲ್ಟೇಜ್ ಕರೆಂಟು….!!

ಕರದಂಟಿನ ನಾಡಿನಲ್ಲಿ ನಾಳೆ ಹೈ ವೋಲ್ಟೇಜ್ ಕರೆಂಟು

ಬೆಳಗಾವಿ- ಗೋಕಾಕ್ ಮತಕ್ಷೇತ್ರದಲ್ಲಿ ನಾಳೆ ನಾಯಕರ ದಂಡೇ ಬರುತ್ತಿದೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ,ಸಿದ್ಧರಾಮಯ್ಯ ಇಬ್ಬರೂ ನಾಯಕರು ನಾಳೆ ರಮೇಶ್ ಜಾರಕಿಹೊಳಿ ಸಾಮ್ರಾಜ್ಯಕ್ಕೆ ಲಗ್ಗೆ ಇಡುತ್ತಿದ್ದು,ನಾಳೆ ಕರದಂಟಿನ ನಾಡಲ್ಲಿ ಹೈ ವೋಲ್ಟೇಜ್ ಕರೆಂಟ್ ಹರಿದಾಡಲಿದೆ ‌

ಗೋಕಾಕ ಮತಕ್ಷೇತ್ರ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ,ಕ್ಷಣ ಕ್ಷಣಕ್ಕೂ ವಾತಾವರಣ ಬದಲಾಗುತ್ತಿದೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.ಗುಡುಗು ಮಿಂಚಿನ ಟೀಕಾ ಪ್ರಹಾರಗಳು ನಡೆಯುತ್ತಿವೆ.ನಾಳೆ ಶನಿವಾರ ಗೋಕಾಕಿನಲ್ಲಿ ಬಿಜೆಪಿಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸವಾಲು ಎದುರಾಗಲಿದೆ.ನಾಳೆಯಿಂದ ಚುನಾವಣೆಯ ಗಾಳಿಯ ದಿಕ್ಕು ಬದಲಾಗುವ ಎಲ್ಲ ಲಕ್ಷಣಗಳು ಗೋಕಾಕಿನಲ್ಲಿ ಕಂಡು ಬಂದಿವೆ .

ನಾಳೆ ಗೋಕಾಕಿಗೆ ಆಗಮಿಸಲಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರ ಪರವಾಗಿ ಭಾಷಣದಲ್ಲಿ ಬಾಂಡರಿ ಸಿಕ್ಸರ್ ಬಾರಿಸಲಿದ್ದಾರೆ ಇವರಿಗೆ ಸತೀಶ್ ಜಾರಕಿಹೊಳಿ ಸಾಥ್ ನೀಡಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಳೆ ಗೋಕಾಕಿನಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿಯವರ ಪ್ರಚಾರ ನಡೆಸಲಿದ್ದಾರೆ.ರೋಡ್ ಶೋ,ಸಾರ್ವಜನಿಕ ಸಭೆಗಳ ಮೂಲಕ ಮತಯಾಚಿಸಿ , ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಲು ಎರಡು ದಿನ ಗೋಕಾಕಿನಲ್ಲೇ ಉಳಿದುಕೊಂಡು ತಂತ್ರ ರೂಪಿಸಲಿದ್ದಾರೆ.

ಹಾಗಾದ್ರೆ ಬಿಜೆಪಿಯೂ ಸಮ್ಮನೆ ಕುಳಿತಿಲ್ಲ ಘಟಾನುಘಟಿ ನಾಯಕರು ಬಂದು ಹೋದ ಮೇಲೆ ಡಿಸೆಂಬರ್ ಎರಡರಂದು ಮತ್ತೆ ಗೋಕಾಕಿಗೆ ಕರೆಯಿಸಿ ಕೊಳ್ಳುವ ಪ್ಲ್ಯಾನ್ ಮಾಡಿದೆ ಡಿಸೆಂಬರ್ ಎರಡರಂದು ಯಡಿಯೂರಪ್ಪ ಇಡೀ ದಿನ ಗೋಕಾಕ್ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಮತಯಾಚಿಸಲಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಿದ್ಯುತ್‌ ತಯಾರಿಸಿದ ನೆಲದಲ್ಲಿ ನಾಳೆಯಿಂದ ಹೈ ವೋಲ್ಟೇಜ್ ಪಾಲಿಟಿಕ್ಸ್ ನಡೆಯಲಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *