ದೇಶದ 72 ರೈತ ಸಂಘಟನೆಗಳು ಪಾರ್ಲಿಮೆಂಟ್ ಗೆ ಮುತ್ತಿಗೆ ಹಾಕ್ತಾರಂತೆ

ಬೆಳಗಾವಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾದ್ಯಕ್ಷ ಕುರುಬೂರ ಶಾಂತಕುಮಾರ ಅವರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಇದೆ 23 ರಂದು ದೇಶದ ಒಟ್ಟು 72 ರೈತ ಸಂಘಟನೆಗಳಿಂದ ಪಾರ್ಲಿಮೆಂಟ್ ಮುತ್ತಿಗೆ ಹಾಕುವದಾಗಿ ತಿಳಿಸಿದ್ದಾರೆ

ರಾಜ್ಯದಲ್ಲೂ ರಸ್ತೆ ತಡೆ ಪ್ರತಿಭಟನೆ ಮತ್ತು ಜೈಲ ಭರೋ ಚಳುವಳಿ ನಡೆಸಿ ರೈತರ ಸಾಲ‌ ಮನ್ನಾ ಮಾಡಲು ಒತ್ತಾಯ ಮಾಡುವದರ ಜೊತೆಗೆ ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವದು ಎಂದು ತಿಳಿಸಿದ್ದಾರೆ

ಈ ಬಾರಿ ಮಾಡು ಇಲ್ಲವೇ ಮಡಿ ಹೋರಾಟ ಮಾಡುತ್ತೇವೆ ರಾಷ್ಟ್ರೀಯ ಕಿಸಾನ್ ಮಹಸಂಘದ ನೇತೃತ್ವದಲ್ಲಿ ಪಾರ್ಲಿಮೆಂಟ್ ಗೆ ಮುತ್ತಿಗೆ ಹಾಕಿ ರೈತರಿಗೆ ನ್ಯಾಯ ಕೊಡಿಸುವ ಸಂಕಲ್ಪ ಮಾಡಿದ್ದೇವೆ ಎಂದು ಕುರುಬರ ಶಾಂತಕುಮಾರ ಹೇಳಿದ್ರು

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *