Breaking News

ಲವ್ ಮಾಡಿ ಮದುವೆಯಾಗಲು ಹೊರಟಿದ್ದ ಜೋಡಿಗೆ ಅಡ್ಡಿ ಪಡಿಸಿದ ಹುಡುಗಿಯ ಚಿಕ್ಕಪ್ಪ ಖಲ್ಲಾಸ್..,….!!!

ಮದುವೆಗೆ ಅಡ್ಡಿ ಪಡೆಸಿದ ಲವರ್ ಚಿಕ್ಕಪ್ಪನನ್ನೇ ಸುಪಾರಿ ಕೊಟ್ಟು ಖಲ್ಲಾಸ್…..!!!

ಬೆಳಗಾವಿ- ಲವ್ ಮಾಡಿ ಮದುವೆಯಾಗಲು ಹೊರಟಿದ್ದ ಲವರ್ ಗಳಿಗೆ ಅಡ್ಡಿಯಾದ ಹುಡುಗಿಯ ಚಿಕ್ಕಪ್ಪನಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಶವವನ್ನು ಕಲ್ಲಿನ ಕ್ವಾರಿಯ ಹೊಂಡದಲ್ಲಿ ಬೀಸಾಡಿದ ಘಟನೆ ನಿಪ್ಪಾನಿಯಲ್ಲಿ ನಡೆದಿದೆ

ನಿಪ್ಪಾನಿಯ ಜೋಡಿಯೊಂದು ಲವ್ ಮಾಡಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು ಹುಡುಗಿಯ ಚಿಕ್ಕಪ್ಪ ಮದುವೆಗೆ ಒಪ್ಪಲಿಲ್ಲ ಮದುವೆಗೆ ಅಡ್ಡಿ ಬಂದ ಚಿಕ್ಕಪ್ಪನ ಕೊಲೆಗೆ ಸುಪಾರಿ ಕೊಟ್ಟು ಕಹಾನಿ ಖತಂ ಮಾಡಿದ ಭೂಪ ಈಗ ಪೋಲೀಸರ ಅತಿಥಿಯಾಗಿದ್ದಾನೆ

ತಲೆಯ ಮೇಲೆ ಕಲ್ಲ
ಹಾಕಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ ಹತ್ಯೆ ಮಾಡಿ ಕಲ್ಲು ಕ್ವಾರಿಯಲ್ಲಿ ಶವ ಬಿಸಾಕಿದ್ದ ದುರುಳರು ಅರೆಸ್ಟ್, ಆಗಿದ್ದಾರೆ
ಅರವಿಂದ ಫೋಳ್ (೪೦) ಕೊಲೆಯಾದ ದುರ್ದೈವಿಯಾಗಿದ್ದಾನೆನಿಪ್ಪಾಣಿ ನಗರದಲ್ಲಿ ನಿನ್ನೆ ಸಂಜೆ ಕೊಲೆ ಮಾಡಿ ಶವವನ್ನು ಕ್ವಾರಿಯಲ್ಲಿ ಬಿಸಾಕಿದ್ದು
ವಿ ಎಸ್ ಎಮ್ ಕಾಲೇಜು ಬಳಿ ಇರುವ ಕ್ವಾರಿಯಲ್ಲಿ ಶವ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ

ಸತೀಶ್,ರವಿ, ಶೀತಲ್, ಮತ್ತು ಶುಭಂ ಬಂಧಿತ ಆರೋಪಿಗಳಾಗಿದ್ದಾರೆ
ಓರ್ವ ಮಹಿಳೆ ಸೇರಿ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು
ಕಲ್ಲುಕ್ವಾರಿಯಲ್ಲಿ ಬಿಸಾಕಿದ್ದ ಶವಕ್ಕಾಗಿ ಅಗ್ನಿ ಶಾಮಕ ಸಿಬ್ಬಂಧಿ ಮತ್ತು ಪೊಲೀಸರ ಹುಡುಕಾಟ ನಡೆಸಿದ್ದಾರೆ

ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಹುಡುಗಿಯ ಚಿಕ್ಕಪ್ಪ ನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಲು ಹುಡುಗನ ಕಾಕಿ ಕೂಡಾ ಸಾಥ್ ನೀಡಿದ್ದಳು ಎಂದು ತಿಳಿದು ಬಂದಿದ್ದು ಲವರ್ಸ ಮದುವೆಗೆ ಅಡ್ಡಿಯಾದ ಚಿಕ್ಕಪ್ಪ ಮಸನ ಸೇರಿದ್ದು ದುರ್ದೈವದ ಸಂಗತಿ

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *