mbbs ಸೀಟು ಕೊಡಿಸುವದಾಗಿ ತ್ರಿಪಾಠಿಗೆ,೪೦ ಲಕ್ಷ ರೂ ಟೋಪಿ

ಬೆಳಗಾವಿ- ಎಂಬಿಬಿಎಸ್ ಸೀಟು ಕೊಡಿಸುವದಾಗಿ ಬೆಳಗಾವಿಯ ಮೂವರು ಖಿಲಾಡಿಗಳು ಕೂಡಿಕೊಂಡು ಮದ್ಯಪ್ರದೇಶದ ಮದನಕುಮಾರ ತ್ರಿಪಾಠಿ ನಲವತ್ತು ಲಕ್ಷ ರೂ ಗಳ ಮಕ್ಮಲ್ ಟೋಪಿ ಹಾಕಿದ ಘಟನೆ ಬೆಳಗಾವಿಯ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ

ಬೆಳಗಾವಿಯ ಸಿದ್ಧಾರ್ಥ,ಅಮೀತ ಮಹೇಶ ಎಂಬುವರು ಮದ್ಯಪ್ರದೇಶದ ಡಾ ಮದನಕುಮಾರ ಅವರನ್ನು ಸಂಪರ್ಕಿಸಿ ಬೆಳಗಾವಿಯ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸುವದಾಗಿ ನಂಬಿಸಿ ಆತನಿಂದ ಬರೊಬ್ಬರಿ ನಲವತ್ತು ಲಕ್ಷ ರೂ ಲಪಟಾಯಿಸಿದ್ದು ವಂಚನೆಗೊಳಗಾದ ಮದ್ಯಪ್ರದೇಶದ ಮದನಕುಮಾರ ಈಗ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ನಲವತ್ತು ಲಕ್ಷ ಪಡೆದು ಮದ್ಯಪ್ರದೇಶದ ತ್ರಿಪಾಠಿಗೆ ಇವರು ಖೊಟ್ಟಿ ದಾಖಲೆ ನೀಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ

ಇತ್ತಿಚಿನ ದಿನಗಳಲ್ಲಿ ಬೆಳಗಾವಿ ನಗರದಲ್ಲಿ ಮೋಸ ವಂಚನೆಯ ಪ್ರಕರಣಗಳು ಜಾಸ್ತಿಯಾಗುತ್ತಿವೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *