ಅಬ್ ಕೀ ಬಾರ್ ಮೈ ಭೀ ಖಾಸದಾರ್….ಅಬ್ ಕೀ ಬಾರ್ 101 ಉಮೆದ್ವಾರ್….!!!

ಬೆಳಗಾವಿ- ಗಡಿನಾಡ ಗುಡಿಯಲ್ಲಿ ಭಾಷಾ ವೈಷಮ್ಯ ದ ಗಂಟೆ ಬಾರಿಸಿ ಭಾಷಾ ಸೌಹಾರ್ದತೆಯ ನೀನಾದ ಕೆಡೆಸುತ್ತ ಬಂದಿರುವ ನಾಡವಿರೋಧಿ ಎಂಈಎಸ್ ಲೋಕಸಭಾ ಚುನಾವಣೆಗೆ 101 ಅಭ್ಯರ್ಥಿಗಳನ್ನು ನಿಲ್ಲಿಸಿ ಪುಂಡಾಟಿಕೆ ಪ್ರದರ್ಶಿಸಲು ಮುಂದಾಗಿದ್ದು ಇಂದಿನಿಂದ ನಾಮಿನೇಶನ್ ಫೈಲ್ ಮಾಡಲು ನಿರ್ಧರಿಸಿದೆ

ನಾಮಪತ್ರ ಸಲ್ಲಿಸಲು ಇವತ್ತಿನಿಂದ ಮೂರು ದಿನ ಬಾಕಿ ಉಳಿದಿದ್ದು ಇಂದು 30 ಜನ ನಾಳೆ 30ಜನ ನಾಡಿದ್ದು ಉಳಿದ ಜನ ನಾಮಿನೇಶನ್ ಫೈಲ್ ಮಾಡಲು ಮುಂದಾಗಿದ್ದು ಬರೊಬ್ಬರಿ 101 ಜನರನ್ನು ಕಣಕ್ಕಿಳಿಸಿ ಚುನಾವಣೆಗೆ ಭಂಗ ತಂದು ಕೇಂದ್ರ ಸರ್ಕಾರದ ಗಮನ ಸೆಳೆದೆ ಗಡಿ ವಿವಾದ ಬೇಗ ಬಗೆಹರಿಸಿ ಎಂದು ಒತ್ತಾಯ ಮಾಡಲಿದ್ದೇವೆ ಎಂದು ಎಂ ಈ ಎಸ್ ನಾಯಕರು ಫರ್ಮಾನು ಹೊರಡಿದ್ದಾರೆ

ಎಂ ಈ ಎಸ್ ನಾಯಕರು ಅಬ್ ಕೀ ಬಾರ್ ಮೈ ಭೀ ಖಾಸದಾರ್….ಅಬ್ ಕೀ ಬಾರ್ 101 ಉಮ್ವೆದಾರ್….ಎನ್ನುವ ಘೋಷಣೆ ರೆಡಿ ಮಾಡಿಕೊಂಡು 11 ಘಂಟೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಲಿದ್ದಾರೆ

ಎಂ ಈ ಎಸ್ ನಾಯಕರ ಲೆಕ್ಕಾಚಾರದಂತೆ 101 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸುತ್ತಾರೋ ಈ ವಿಷಯದಲ್ಲೂ ಎಂ ಈ ಎಸ್ ಕಂಗಾಲ್ ಆಗುತ್ತದೆಯೋ ಅನ್ನೋದನ್ನು ಕಾದು ನೋಡಬೇಕು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *