ಅಪ್ಪಾಸಾಬ ಮುತಗೇಕರ ಮನೆಗೆ ಸಚಿವ ಅನಂತಕುಮಾರ ಭೇಟಿ

ಬೆಳಗಾವಿ- ಜನಸಂಘದ ಸಂಸ್ಥಾಪಕ ಸದಸ್ಯರಾಗಿ ಅದ್ಯಕ್ಷರಾಗಿ ಹಲವಾರು ದಶಕಗಳ ಕಾಲ ಸೇವೆ ಮಾಡಿದ ಅಪ್ಪಾಸಾಬ ಮುತಗೇಕರ ಅವರು ಇತ್ತಿಚಿಗೆ ನಿಧನ ಹೊಂದಿದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಅವರು ಮೋದಿ ಸರ್ಕಾರದ ಪ್ರತಿನಿಧಿಯಾಗಿ ಮುತಗೇಕರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು

ವಡಗಾವಿಯಲ್ಲಿರುವ ಅಪ್ಪಾಸಾಬ ಮುತಗೇಕರ ಅವರ ಮನೆಗೆ ಭೇಟಿ ನೀಡಿದ ಅನಂತಕುಮಾರ ಅಪ್ಪಾಸಾಬ ಮುತಗೇಕರ ಅವರ ಧರ್ಮಪತ್ನಿಯ ಜೊತೆ ಅರ್ಧ ಗಂಟೆಯ ಕಾಲ ಮಾತನಾಡಿ ಸಾಂತ್ವನ ಹೇಳಿದರು ಮಾಜಿ ಶಾಸಕ ಅಭಯ ಪಾಟೀಲ ಸೇರಿದಂತೆ ಹಲವಾರು ಜನ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ ಅಪ್ಪಾಸಾಬ ಮುತಗೇಕರ ಅವರು ಜನಸಂಘದ ಸಂಸ್ಥಾಪಕ ಸದಸ್ಯರಾಗಿ ಅದ್ಯಕ್ಷರಾಗಿ ಹಲವಾರು ದಶಕಗಳ ಕಾಲ ಸೇವೆ ಮಾಡಿ ಈ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರು ಅವರ ಅಗಲಿಕೆಯಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಅಪ್ಪಾಸಾಬ ಮುತಗೇಕರ ಅವರ ಗರಡಿಯಲ್ಲಿ ಹಲವಾರು ಜನ ನಾಯಕರು ಬೆಳೆದಿದ್ದಾರೆ ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿ ಶೃದ್ಧಾಂಜಲಿ ಅರ್ಪಿಸಿದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *