Breaking News

ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಳಗಾವಿ-ತನ್ನಿಬ್ಬರ ಹೆಣ್ಣು ಮಕ್ಕಳ ಜೊತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ.ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಉಚ್ಚಗಾಂವ ಬಳಿ ನಡೆದಿದೆ

ಉಚ್ಚಗಾಂವ ನಿವಾಸಿ ಉಜ್ವಲ್ (೪೩) ಮಕ್ಕಳಾದ ಸಿದ್ದು (೪),ಸೋಯಿರಾ (೨) ಮೃತರು.ಎಂದು ಗುರುತಿಸಲಾಗಿದೆ
ಅತ್ತೆ ಜೊತೆ ಜಗಳವಾಡಿ ತವರುಮನೆಗೆ ಹೊಗುವಾಗಿ ಹೇಳಿ ತನ್ನ ಇಬ್ಬರು ಮಕ್ಕಳೊಂದಿಗೆ  ಮಾರ್ಕಂಡೇಯ ನದಿ ದಂಡೆಯ ಮೇಲೆ ಕೆಲ ಹೊತ್ತು ಕುಳಿತ ತಾಯಿ ಶುಕ್ರವಾರ ಮಧ್ಯಾಹ್ನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ತಾಯಿ ತನ್ನ ಇಬ್ಬರು ಹೆಣ್ಣು ಕುಡಿಗಳ ಜೊತೆ ನದಿಗೆ ಹಾರಿದ ದೃಶ್ಯ ನೋಡಿದ ರೈತರು ತಕ್ಷಣ ಅಲ್ಲಿಗೆ ದೌಡಾಯಿಸುವಷ್ಟರಲ್ಲಿ ಮೂವರ ಪ್ರಾಣ ಪಕ್ಷಿ ಹಾರಿ ಹೋಗಿತ್ರು

ಮೂವರ ಆತ್ಮಹತ್ಯೆ ಸುದ್ದಿ ತಿಳಿದು ಗಂಡ ವಿಠ್ಠಲ ಪಾವಸೆ ಅಸ್ವಸ್ಥ,ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ
ಮೂವರ ಶವವನ್ನು ಹೊರ ತೆಗೆದಿದ್ದು ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗುತ್ತಿದೆ.
ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಮಹಾತಾಯಿ ಇಬ್ಬರು ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಜೆ ದಿನನಿತ್ಯ ಕಿರುಕಳ ಅನುಭವಿಸುತ್ತಿದ್ದಳು ಎಂದು ತಿಳಿದು ಬಂದಿದೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *