ರಾಹುಲ್ ಗಾಂಧೀಗೆ ಸುರೇಶ ಅಂಗಡಿ ಟಾಂಗ್ ಕೊಟ್ಟಿದ್ದು ಯ್ಯಾಕೆ ಗೊತ್ತಾ ?

ಬೆಳಗಾವಿ- ರಾಹುಲ್ ಗಾಂಧಿ ರನ್ ಪಾರ್ ಟೆಂಪಲ್ ಗೆ ಕುರಿತು ಸಂಸದ ಸುರೇಶ ಅಂಗಡಿ ಟಾಂಗ್ ಕೊಟ್ಟಿದ್ದಾರೆ

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು
70 ವರ್ಷದ ಹಿಂದೆ ದೇಶವನ್ನು ಇಬ್ಬಾಗ ಮಾಡಿ ಈಗ ರಾಜ್ಯ ಸರ್ಕಾರ 21 ಜನರ ಹಿಂದುಗಳ ಕೊಲೆಗೈದ ಕಾಂಗ್ರೆಸ್ ಸರಕಾರ ಹಿಂದೂಗಳ ಮೇಲೆ ಅನುಕಂಪ ತೋರಿಸುತ್ತಿರುವುದು ಖಂಡನೀಯ ಎಂದು ಸುರೇಶ ಅಂಗಡಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು

ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ಟೆಂಪಲ್‌ ರನ್ ನಡೆಸಿದ್ದಾರೆ 70 ವರ್ಷಗಳಿಂದ ಕಾಂಗ್ರೆಸಗೆ ಹಿಂದೂಗಳ‌ ಮೇಲೆ ಗೌರವ ಬರಲಿಲ್ಲ
ಕಾಂಗ್ರೆಸ್ ಅಧಿಕಾರದಲ್ಲಿಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕಿತ್ತು ಎಂದು ಸುರೇಶ ಅಂಗಡಿ ಹೇಳಿದರು

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಿಟ್ಟುಕೊಂಡು ರಾಹುಲ್ ಗಾಂಧಿ ಹಿಂದೂ ದೇವಾಲಯಗಳಿಗೆ ಟೆಂಪಲ್ ರನ್ ನಡೆಸಿದ್ದಾರೆ ಎಂದು ಆರೋಪಿಸಿದ ಅವರು
ರಾಹುಲ್ ಗಾಂದಿ ಮೊದಲು ರಾಮಮಂದಿರ ಬಗ್ಗೆ ಮಾತನಾಡಲಿ ನಂತರ ರನ್ ಪಾರ್ ಟೆಂಪಲ್ ಮಾಡಲಿ ಎಂದು ತಿರುಗೇಟು ಕೊಟ್ಟರು

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *