ಕ್ರಾಂತಿ ಅಂದ್ರೆ ಇದಪ್ಪ..ಮೋದಿಯ ಮೋಡಿಗೆ.ಎಲ್ಲರೂ ಜೈ.ಹೋ..ಅಂದ್ರಪ್ಪ

ಬೆಳಗಾವಿ- ಆ ಕ್ರಾಂತಿ ಈ ಕ್ರಾಂತಿ ಅಂತ ನಾವು ಕೇಳಿದ್ವಿ.ಪುಸ್ತಕಳಲ್ಲಿ ಓದಿದ್ವಿ ಆದರೆ ಕ್ರಾಂತಿ ಅಂದರೆ ಹೇಗಿರುತ್ತದೆ ಅನ್ನೋದನ್ನ ನಾವು ನೋಡಿರಲಿಲ್ಲ ಕ್ರಾಂತಿ ಅಂದ್ರೆ ಇದಪ್ಪ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತೋರಿಸಿ ಕೊಟ್ಟಿದ್ದಾರೆ

ರಾತ್ರೋ ರಾತ್ರಿ ೫೦೦ ಹಾಗು ೧೦೦೦ ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಸಾವಿರ ಸಾವಿರ ಕೋಟಿ ಹಣ ಲೂಟಿ ಮಾಡಿದ ಖದೀಮರಿಗೆ ಪ್ರಧಾನಿ ನರೇಂದ್ರ ಮೋದಿ ಲಗಾಮು ಹಾಕಿದ್ಸಾರೆ

ಈಗ ಮನೆಗೆ ಹೋದ್ರೂ ಕಚೇರಿಗೆ ಹೋದ್ರೂ ಪೇಠೆಗೆ ಹೋದ್ರೂ ಮೋದಿ ಸಾಹೇಬರು ತೆಗೆದುಕೊಂಡ ದಿಟ್ಟ ನಿರ್ಧಾರದ ಬಗ್ಗೆಯೇ ಚರ್ಚೆ ನಡೆಯುತ್ತಿದ್ದೆ ನಮ್ಮ ಬೈಲಹೊಂಗಲ ಭಾಷೆಯಲ್ಲಿ ಹೇಳ ಬೆಕೆಂದರೆ ಭಲೇ ಭೇಶ್ ಎಂದು ಪ್ರತಿಯೊಬ್ಬರು ನರೇಂದ್ರ ಮೋದಿ ಅವರ ಕ್ರಮಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ

ಬೆಳಗಾವಿ ನಗರದಲ್ಲಿ ೫೦೦ ಹಾಗು ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳು ಚಲಾವಣೆ ಆಗುತ್ತಿಲ್ಲ ಹೀಗಾಗಿ ಜನ ಸ್ವಲ್ಪ ತೊಂದರೆ ಆದರೂ ಪರವಾಗಿಲ್ಲ ಮೋದಿ ತೆಗೆದುಕೊಂಡ ನಿರ್ಧಾರ ದೇಶದ ದಿಕ್ಸೂಚಿಯನ್ನು ಬದಲಾಯಿಸುತ್ತದೆ ಎಂದು ಜನ ಸಾಮಾನ್ಯರು ನಂಬಿದ್ದಾರೆ

ಅಚ್ಛೆ ದಿನ ಆ ಗಯೇ ಅನ್ನೋದಕ್ಕೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿರ್ಧಾರ ಪೂರಕ ವಾಗಿದ್ದು ಕಪ್ಪು ಹಣ ಸಂಗ್ರಹಿಸಿಟ್ಟ ಲೂಟಿಖೋರರ ಮಟ್ಟಹಾಕುವದರಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದು ಅಲ್ಪಾವಧಿಯಲ್ಲಿಯೇ ರೂಪಾಯಿ ಬೆಲೆ ಡಾಲರ್ ಬೆಲೆಗೆ ಸಮ ಆಗುವ ಕಾಲ ಈಗ ದೂರ ಉಳದಿಲ್ಲ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *