Breaking News

ಬೀಸುವ ದೊಣ್ಣೆಯಿಂದ ಪಾರಾದ ವಿಕೃತ ಕಾಮಿ

ಬೆಳಗಾವಿ-ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಲ್ಲಿರುವ ವಿಕೃತ ಕಾಮಿ ಉಮೇಶ ರೆಡ್ಡಿ ಕೊನೆಗೂ ಬೀಸುವ ದೊಣ್ಣೆಯಿಂದ ಪಾರಾಗಿದ್ದಾನೆ ಗಲ್ಲು ಶಿಕ್ಷೆಗೆ ಗುರಿಯಾದ ಇತನಿಗೆ ಮರಣ ದಂಡನೆ ಗ್ಯಾರಂಟಿಯಾಗಿತ್ತು ಆದರೆ ಇತನು ಗಲ್ಲು ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ ಅರ್ಜಿ ಆಲಿಸಿದ ಸಿಜೆ ನೇತ್ರತ್ವದ ನ್ಯಾಯ ಪೀಠವು ಶಿಕ್ಷೆ ಜಾರಿಗೆ ಮದ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ

ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿರುವ ಪೀಠವು ಅಕ್ಷೇಪಣೆ ಸಲ್ಲಿಸಲು ಹತ್ತು ದಿನ ಅವಕಾಶ ನೀಡಿದೆ ವಿಚಾರಣೆ 15 ದಿನ ಮುಂದೂಡಲಾಗಿದ್ದು ಉಮೇಶ ರೆಡ್ಡಿ ಸದ್ಯಕ್ಕೆ ನೇಣು ಕುಣಿಕೆಯಿಂದ ಪಾರಾಗಿದ್ದಾನೆ ಅಕ್ಷೇಪಣೆ ಸಲ್ಲಿಸಿದ ಬಳಿಕ ಅರ್ಜಿ ವಿಚಾರಣೆ ಮಾಡುವದಾಗಿ ನ್ಯಾಯಾಲಯ ತಿಳಿಸಿದೆ

ಬೀಸುವ ದೊಣ್ಣೆಯಿಂದ ಪಾರಾದರೆ ನೂರು ವರ್ಷ ಆಯುಶ್ಯ  ಎನ್ನುವಂತೆ ವಿಕೃತ ಕಾಮಿ ಸದ್ಯಕ್ಕೆ ರಿಲ್ಯಾಕ್ಸ  ಆಗಿದ್ದಾನೆ

Check Also

ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ

ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡುವಂತೆ ರಾಜ್ಯದ ವಸತಿ,ವಕ್ಫ್ …

Leave a Reply

Your email address will not be published. Required fields are marked *