ಎಸ್. ಎಂ. ಕೃಷ್ಣ ,ಕಾಂಗ್ರೆಸ ಬಿಡುವ ನಿರ್ಧಾರ ಕೈ ಬಿಡಲಿ-ರಾಜು ಸೇಠ-

,ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಮಾಡಿದ್ದು ,ಕಾಂಗ್ರೆಸ್ ಪಕ್ಷವನ್ನು ಬಿಟ್ಟು ರಾಜಕೀಯದಿಂದ ನಿವೃತ್ತಿಯಾಗುವ ಅವರ ನಿರ್ಧಾರದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೋವಾಗಿದ್ದು ಎಸ್ ಎಂ ಕೃಷ್ಣ ಅವರು ತಮ್ಮ ನಿರ್ಧಾರ ವನ್ನು ಕೈಬಿಟ್ಟು ಪಕ್ಷಕ್ಕೆ ಮರಳಿ ಬರಲಿ ಎಂದು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜು ಸೇಠ ಮನವಿ ಮಾಡಿಕೊಂಡಿದ್ದಾರೆ

ಎಸ್ ಎಂ  ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕೇಂದ್ರದ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಅವರು ಮಾಡಿರುವ ಸೇವೆ ಅಪ್ರತಿಮವಾಗಿದೆ ಅವರ ರಕ್ತದಲ್ಲಿಯೂ ಕಾಂಗ್ರೆಸ ಪಕ್ಷದ ಸ್ವಾಭಿಮಾನ ಹರಿಯುತ್ತಿದೆ ಅವರ ಧಿಡೀರ್ ನಿರ್ಧಾರದಿಂದ ಕಾಂಗ್ರೆಸ ಕಾರ್ಯಕರ್ತರಿಗೆ ಅನಾಥ ಪ್ರದ್ಞೆ ಕಾಡುತ್ತಿದೆ ಎಂದು ರಾಜು ಸೇಠ ತಿಳಿಸಿದ್ದಾರೆ

ಎಸ್.ಎಂ ಕೃಷ್ಣಾ ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಿದ್ದು ಅವರು ಪಕ್ಷಕ್ಕೆ ಮರಳಿ ಬರಲಿ ಎಂದು ರಾಜು ಸೇಠ ಮನವಿ ಮಾಡಿಕೊಂಡಿದ್ದಾರೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *