ಸತೀಶ್ ವಿರುದ್ಧ ಗುಡುಗಿದ ಸುಳೇಭಾವಿ ಸಮಾವೇಶ

ಬೆಳಗಾವಿ-

ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಕಾಂಗ್ರೆಸ್ ಪಕ್ಷದ ಆಂತರಿಕ ಬೇಗುದಿಯನ್ನು ಹೊರ ಹಾಕಿತು
ಸಮಾವೇಶಕ್ಕೆ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೋಳಿ ಗೈರಾಗಿದ್ದರು
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಅವರು
ಗ್ರಾಮೀಣ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಒಟ್ಟಾಗಿ ನಿಂತ್ರೆ ಯಾವ ನಾಯಕರ ಆಟ ನಡೆಯೋದಿಲ್ಲ.
ಗೋಕಾಕ ಕ್ಷೇತ್ರದಲ್ಲೂ ನನ್ನನ್ನೂ ಸೋಲಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಅವರ ಗಂಡಸತನ ಎಷ್ಟಿದೆ ಅಂತಾ ನನಗೆ ಗೊತ್ತಿದೆ.ನೀವು ಹೆದರಬೇಡಿ ಅಂತಾ ಇಲ್ಲಿ ಯಾರು ಹೆದರಬೇಡಿ, ಇಲ್ಲಿ ಯಾರೂ ತೊಂದರೆ ಕೊಡಲು ಬರುವುದಿಲ್ಲ.
ಅಪರೋಕ್ಷವಾಗಿ ಸಹೋದರ ಸತೀಶ ಜಾರಕಿಹೋಳಿಗೆ ಟಾಂಗ್ ನೀಡಿದರು
ಹಿರಿಯ ನಾಯಕ ಆರ್ ವ್ಹಿ ದೇಶಪಾಂಡೆ ಮಾತನಾಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸುವವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಗುಡುಗಿದರು
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗು ಪಕ್ಷದ ಹಿರಿಯ ನಾಯಕರ ಎದುರೇ ಕಾಂಗ್ರೆಸ್ ನಾಯಕರು ಸತೀಶ್ ಅವರ ಹೆಸರು ಪ್ರಸ್ತಾಪಿಸದೇ ಅವರ ವಿರುದ್ಧ ಹರಿಹಾಯ್ದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *