Breaking News

ಹೊಲದಲ್ಲಿ ಕೊರೆದ ಕೊಳವೆ ಬಾವಿಗೆ, ನೀರು ಬರಲಿಲ್ಲ ಅಂತಾ ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ರೈತ…

ಬೆಳಗಾವಿ-ರಾಯಬಾಗ ತಾಲ್ಲೂಕಿನ
ಸುಲ್ತಾನಪುರ್ ಗ್ರಾಮದಲ್ಲಿ ತನ್ನ ಹೊಲದಲ್ಲಿ ಕೊಳವೆ ಬಾವಿ ಕೊರೆದ ರೈತನೊಬ್ಬ ಕೊಳವೇ ಬಾಯಿಯಲ್ಲಿ ನೀರು ಬರಲಿಲ್ಲ ಅಂತಾ ಮನನೊಂದು ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸ್ಥಳಕ್ಕೆ ರಾಯಬಾಗ ತಹಶಿಲ್ದಾರ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ
ಲಕ್ಕಪ್ಪ ದೊಡ್ಡಮನಿ ಎಂಬಾ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶವ ಹೊರ ತೆಗೆಯಲು
ಜೆಸಿಬಿಯಿಂದ ಕೊಳವೆ ಬಾವಿ ಪಕ್ಕದಲ್ಲಿ ಗುಂಡಿ ಅಗೆದು ಶವ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಲಿದೆ.

ಎರಡು‌ ದಿನಗಳ ಹಿಂದೆ ರೈತ ಕೊರೆಸಿದ್ದ ಕೊಳವೆ ಬಾವಿಗೆ ನೀರು ಬರಲಿಲ್ಲ ಎಂಬ ಕಾರಣಕ್ಕೆ ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಲಕ್ಕಪ್ಪನ ಶವವನ್ನು ಹೊರ ತೆಗೆಯಲು ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.

ಸುಲ್ತಾನಪುರ್ ದಲ್ಲಿ ಕೊಳವೆ ಬಾವಿಗೆ ಬಿದ್ದ 38 ವರ್ಷದ ಲಕ್ಕಪ್ಪ ದೊಡಮನಿ ಆತ್ಮಹತ್ಯೆ ಕುರಿತು
ಬೆಳಗಾವಿ ಜಿಲ್ಲೆಯ
ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *