Breaking News

ಸವದತ್ತಿ ಯಲ್ಲಮ್ಮ ದೇವಿಯ, ದವನದ ಹುಣ್ಣಿಮೆ ಜಾತ್ರೆ, ಇಲ್ಲ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿ, ದೇವಸ್ಥಾನದಲ್ಲಿ ಪ್ರತಿವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ದವನದ ಹುಣ್ಣಿಮೆ ಜಾತ್ರೆಯನ್ನು ಈ ಬಾರಿ ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲು ಅಲ್ಲಿಯ ಅರ್ಚಕರು,ಮತ್ತು ಆಡಳಿತ ಮಂಡಳಿ ನಿರ್ಧರಿಸಿದೆ.

ಏಪ್ರಿಲ್ 7 ಮತ್ತು 8 ರಂದು ದವನದ ಹುಣ್ಣಿಮೆಯ ಜಾತ್ರೆ ನಡೆಯಬೇಕಿತ್ತು ಎರಡು ದಿನ ಲಕ್ಷಾಂತರ ಭಕ್ತರು ಅಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು.ಆದರೆ ಈ ವರ್ಷ ದೇಶಾದ್ಯಂತ್ಯ ಕೊರೋನಾ ಕರಿನೆರಳು ಬಿದ್ದಿರುವದರಿಂದ ,ದೇಶವೇ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಇರುವದರಿಂದ ಈ ಜಾತ್ರೆ ಈ ಬಾರಿ ಸಂಪ್ರದಾಯಿಕ ಪೂಜೆಗೆ ಮಾತ್ರ ಸಿಮೀತವಾಗಿದೆ. ಅರ್ಚಕರು,ಆಡಳಿತ ಮಂಡಳಿಯ ಸದಸ್ಯರು ದೇವಿಗೆ ಪೂಜೆ ಸಲ್ಲಿಸಿ ಜಾತ್ರೆಯ ಪೂಜಾ ಸಂಪ್ರದಾಯಗಳನ್ನು ನೆರವೇರಿಸುತ್ತಾರೆ.ಸಾರ್ವಜನಿಕರಿಗೆ ಅವಕಾಶ ಇರೋದಿಲ್ಲ.

ಈ ಬಾರಿ ಜಾತ್ರೆ ನಡೆಯೋದಿಲ್ಲ ಭಕ್ತಾದಿಗಳು,ಮನೆಯಲ್ಲೇ ಪೂಜೆ ಮಾಡಿ ದೇವಿಯನ್ನು ಸ್ಮರಿಸಿ ದೇಶದ ಒಳತಿಗಾಗಿ ಪ್ರಾರ್ಥಿಸಬೇಕೆಂದು ಸವದತ್ತಿ ಯಲ್ಲಮ್ಮ ದೇವಿ ಟ್ರಸ್ಟನ ಆಡಳಿತ ಅಧಿಕಾರಿಗಳು ಭಕ್ತಾಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ‌

ಸವದತ್ತಿ ಯಲ್ಲಮ್ಮ ದೇವಿಯ ದೇವಸ್ಥಾನದ ದವನದ ಹುಣ್ಣಿಮೆ ಜಾತ್ರೆಗೆ ನೆರೆಯಮಹಾರಾಷ್ಟ್ರ,ಆಂದ್ರ,ಗೋವಾ ಸೇರಿದಂತೆ ನೆರೆಯ ರಾಜ್ಯಗಳಿಂದ ಮತ್ತು ಕರ್ನಾಟಕದ ಮೂಲೆ,ಮೂಲೆಗಳಿಂದ ಲಕ್ಷಾಂತರ ಭಕ್ತರು ಪ್ರತಿ ವರ್ಷ ಸವದತ್ತಿಗೆ ಬರುತ್ತಿದ್ದರು.

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *