ದಿಲ್ಲಿಯಿಂದ ಬೆಳಗಾವಿ ಹಳ್ಳಿಗೆ ಹಬ್ಬಿದ ಆತಂಕ….ಈ ಹಳ್ಳಿ ಈಗ ಸಂಪೂರ್ಣ ಲಾಕ್ ಡೌನ್….!!!

ಬೆಳಗಾವಿ-ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿ ಧರ್ಮಸಭೆಯ ಎಫೆಕ್ಟ್‌ಗೆ ಈಗ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರ ಮೇಲೂ ಆಗಿದ್ದು ಈ ಹಳ್ಳಿ ಈಗ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ.

ದೆಹಲಿಯ ಜಮಾತ್‌ನಲ್ಲಿ ಭಾಗವಹಿಸಿ ಬಂದವನ‌ ಜತೆ ಶಿಂಧಿಕುರಬೇಟನ 10 ಜನ‌ರು ಪ್ರಯಾಣಿಸಿದ ಮಾಹಿತಿ ಗ್ರಾಮದಲ್ಲಿ ಹರಿದಾಡುತ್ತಿದ್ದಂತೆಯೇಶಿಂಧಿಕುರಬೇಟ ಗ್ರಾಮದಲ್ಲಿ ಆ 10 ಜನರಿಗೂ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ.

ಶಿಂಧಿಕುರಬೇಟನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 10 ಜನರಿಗೆ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ.

ನಿನ್ನೆ ಮಧ್ಯರಾತ್ರಿ 1 ಗಂಟೆಯವರೆಗೂ ಡಂಗೂರ ಸಾರಿ ಊರಿಗೆ ಊರೇ ಕಂಪ್ಲೀಟ್ ಲಾಕ್‌ಡೌನ್ ಮಾಡಿಸಿದ ಗ್ರಾಮದ ಹಿರಿಯರು ಇಂದು ಬೆಳಿಗ್ಗೆಯೂ ಗ್ರಾಮದಲ್ಲಿ ಡಂಗುರ ಸಾರಿ ,ಮನೆಯಿಂದ ಯಾರೂ ಹೊರಗೆ ಬರಬ್ಯಾಡ್ರಿಪೋ ಅಂತ ಡಂಗುರ ಸಾರಿ ಗ್ರಾಮಸ್ಥರಿಗೆ ವಾರ್ನಿಂಗ್ ಮಾಡಿದ್ದಾರೆ

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಈಗ ಎಲ್ಲವೂ ಸ್ತಬ್ಧ ವಾಗಿದೆ.

ತಡರಾತ್ರಿ 1ಗಂಟೆಯವೆರೆಗೆ ಡಂಗೂರ ಸಾರಿ ಊರಿಗೂರೆ ಸಂಪೂರ್ಣ ಬಂದ್ ಮಾಡಿಸಿರುವ ಯುವಕರು, ಬಿಕೋ ಎನ್ನುತ್ತಿರು ಗ್ರಾಮದ ಮುಖ್ಯ ಬೀದಿಗಳು ಮನೆಯಿಂದ ಯಾರೂ ಹೊರ ಬೀಳದೆ ಕಂಪ್ಲೀಟ್ ಲಾಕ್‌ ಡೌನ್ ಪಾಲಿಸುತ್ತಿರುವ ಗ್ರಾಮಸ್ಥರು.ಇದು ಶಿಂದಿಕುರಬೇಟ ಗ್ರಾಮದ ಇವತ್ತಿನ ಹೈಲೆಟ್ಸ…

ಹೋಮ್ ಕ್ವಾರಂಟೈನ್ ಆಗಿರುವ ಶಿಂದಿಕುರಬೇಟ ಗ್ರಾಮದ ಹತ್ತು ಜನ ನಾಲ್ವತ್ತು ದಿನದ ಹಿಂದೆ ದೆಹಲಿಗೆ ಹೋಗಿ ಬಂದಿದ್ದರು ಎಂದು ಹೇಳಲಾಗಿದೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *