Breaking News

ಸ್ಮಾರ್ಟ್ ಸಿಟಿ ಯೋಜನೆ ಬೆಳಗಾವಿಗೆ ಕೆನಡಾ ತಂಡ ಆಗಮನ

ಬೆಳಗಾವಿ- ಬೆಳಗಾವಿಯ ಸ್ಮಾರ್ಟ ಸಿಟಿ ಯೋಜನೆಯ ಕುರಿತು ಕನ್ಸಲ್ಟನ್ಸಿ ಗೆ ಮಾರ್ಗದರ್ಶನ ಮಾಡಲು ಕೆನಡಾ ದೇಶದ ಕಂಪನಿಯೊಂದು ಮುಂದಾಗಿದ್ದು ಕಂಪನಿಯ ಇಬ್ಬರು ಪ್ರತಿನಿಧಿಗಳು ಬೆಳಗಾವಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ

ಜಿಲ್ಲಾಧಿಕಾರಿ ಎನ್ ಜಯರಾಂ,ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಪಾಲಿಕೆ ಆಯುಕ್ತ ಶಶಿಧರ ಕುರೇರ ಅಭಿಯಂತರರಾದ ಆರ್ ಎಸ್ ನಾಯಕ ಮತ್ತು ಲಕ್ಷ್ಮೀ ನಿಪ್ಪಾಣಿಕೆರ ಅವರು ಸಮಾಲೋಚನೆಯಲ್ಲಿ ಭಾಗವಹಿಸಿದ್ದಾರೆ

ಕೆನಡಾ ದೇಶದದಲ್ಲಿ ಅನೇಕ ಹೈಟೆಕ್ ಕಾಮಗಾರಿ ನಡೆಸಿರುವ ಕೆನಡಾ ಮೂಲದ ಕಂಪನಿ ಬೆಳಗಾವಿಯ ಸ್ಮಾರ್ಟ್ಸಿ ಸಿಟಿ ಯೋಜನೆಯ ಕಾರ್ಯದಲ್ಲಿ ಕೈಜೋಡಿಸಲು ಮುಂದಾಗಿದೆ ಯಾವ ಯಾವ ರೀತಿಯಲ್ಲಿ ಬೆಳಗಾವಿ ನಗರವನ್ನು ಸ್ಮಾರ್ಟ್ ಮಾಡಬಹುದು ಅನ್ನೋದರ ಬಗ್ಗೆ ಕಂಪನಿಯ ಇಬ್ಬರು ಪ್ರತಿನಿಧಿಗಳು ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸುತ್ತಿದ್ದಾರೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *