Breaking News

ಸತ್ತರೆ ಅವರು ಸಾಯ್ತಾರೆ ನಾವ್ಯಾಕ ತಲೆ ಕೆಡಿಸಿಕೊಳ್ಳಬೇಕೀಗ……????

ಬೆಳಗಾವಿ-ಸೋಂಕಿತರು ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲವೆಂದು ಮಾದ್ಯಮಗಳ ಪ್ರಶ್ನೆಗೆ ಕೇಂದ್ರ ಸಚಿವರು ಡಿಫರೆಂಟ್ ಆಗಿ ಉತ್ತರಿಸಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಡಿಸ್ಟನ್ಸ್ ಇಲ್ಲದಿದ್ರೆ ಹೇಗೆ ಇಂಪ್ರೂವ್ ಆಗುತ್ತಿದ್ದಾರೆ ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಪ್ರಶ್ನೆ ಮಾಡಿದ್ರು.. ಯಾವ ಪೇಷಂಟ್ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಹೇಳಿ. ಪೇಷಂಟ್ ನಂಬರ್ ಇದಾವೆ.. ಅವರನ್ನ ಇಲ್ಲಿಯೇ ಕರಿಸ್ತೀನಿ ಯಾರಂತ ಹೇಳಿ ಎಂದು ಮಾಧ್ಯಮವರನ್ನು ಪ್ರಶ್ನಿಸಿದ ಅವರು, ಅವರ ಆರೋಗ್ಯ ಅವರು ಕಾಪಾಡಿಕೊಳ್ಳಬೇಕು, ನಾವು ನೀವು ಎಲ್ಲರೂ ಈಗ ಹೇಳಿದ್ದೇವೆ. ಎಂದರು.

ಪಾಸಿಟಿವ್ ಬರುವ ಮುಂಚೆ ಸಾಮೂಹಿಕ ಕ್ವಾರಂಟೈನ್‌ನಲ್ಲಿ ಡಿಸ್ಟನ್ಸ್ ಮೆಂಟೇನ್ ಮಾಡಿಕೊಳ್ಳುತ್ತಿಲ್ಲ ಎಂದು ಮಾಧ್ಯಮದವರ ಮತ್ತೊಮ್ಮೆ ಪ್ರಶ್ನೆ ಮಾಡಿದಾಗ, ಈಗಾಗಲೇ ವಾರ್ನಿಂಗ್ ಮಾಡಿ ಡಿಸ್ಟನ್ಸ್ ಕಾಪಾಡಿಕೊಳ್ಳಲು ಹೇಳಿದ್ದೇವೆ .ಸತ್ತರೆ ಅವರು ಸಾಯ್ತಾರೆ ನಾವ್ಯಾಕ ತಲೆ ಕೆಡಿಸಿಕೊಳ್ಳಬೇಕೀಗ?ಡಿಸ್ಟನ್ಸ್ ಮೆಂಟೇನ್ ಮಾಡಿ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಅಂತಾ ಹೇಳಿದ್ದೇವೆ ಈಗಾಗಲೇ ಸರ್ಕಾರ ಹೇಳಿದೆ, ಜಿಲ್ಲಾಧಿಕಾರಿಗಳು, ವೈದ್ಯರು ಎಲ್ಲರೂ ಹೇಳಿದ್ದಾರೆ. ಇಷ್ಟು ಹೇಳಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ರೆ ಜವಾಬ್ದಾರಿ ಯಾರ ತಗೋಬೇಕು ಎಂದು ರಾಜ್ಯ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ,ಮರು ಪ್ರಶ್ನೆ ಮಾಡಿ ಬೇಸರ ವ್ಯೆಕ್ತಪಡಿಸಿದರು .

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *