ಕಿತ್ತೂರಿನಲ್ಲಿ ಇಂದು ದೇವೇಗೌಡರಿಗೆ ಯಡಿಯೂರಪ್ಪ ಹೇಳಿದ್ದೇನು ಗೊತ್ತಾ..?

ಅಪ್ಪ‌ ಮಕ್ಕಳ ಸೊಸೆಯಂದಿರ ಕಾಟ ಮುಗೀತು ಈಗ ಮೊಮ್ಮಕ್ಕಳ ಕಾಟ ಆರಂಭವಾಗಿದೆ,ದೇವೆಗೌಡರಿಗೆ ಯಡಿಯೂರಪ್ಪ ಟಾಂಗ್

ಬೆಳಗಾವಿ- ಕಿತ್ತೂರು ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ರಾಜ್ಯಾದ್ಯಕ್ಷ ಯಡಿಯೂರಪ್ಪ ದೇವೆಗೌಡರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ  ಕುಮಾರಸ್ವಾಮಿ ನೇತೃತ್ವದ ಸರ್ಕಾರ ವರ್ಗಾವಣೆ ದಂಧೆಯ ಲೂಟಿ‌ ಮಾಡುತ್ತಿದೆ.ಯಾವ ಅಭಿವೃದ್ಧಿ ಕಾರ್ಯ ಮಾಡಿಲ್ಲ. ರೈತರ ಸಾಲಾ ಮನ್ನಾ ಮಾಡದೆ ರೈತ ಸಮೂಹಕ್ಕೆ ದ್ರೋಹ ಮಾಡಿದ್ದಾರೆ.
ಭ್ರಷ್ಟ ಮುಖ್ಯಮಂತ್ರಿ ರಾಜ್ಯದಲ್ಲಿ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು

ಕಾಂಗ್ರೆಸ್ ನ ಇಪ್ಪತ್ತಕ್ಕೂ ಅಧಿಕ ಶಾಸಕರು ಸರ್ಕಾರಕ್ಕೆ ಬೆಂಬಲ ಕೊಡುತ್ತಿಲ್ಲ.
ಮಂಡ್ಯದಲ್ಲಿ ಸುಮಲತಾ ಗೆಲ್ಲುವುದು ನಿಶ್ಚಿತ.
ಸುಮಲತಾ ಸೋಲಿಸುವುದಕ್ಕಾಗಿ ಶಿವರಾಮೇಗೌಡ ಮಾತನಾಡಿದ ಆಡಿಯೋ ಬಹಿರಂಗವಾಗಿದೆ. 150ಕೋಟಿ ಹಣ ಖರ್ಚು ಮಾಡುತ್ತೇವೆ ಎನ್ನುತ್ತಿದ್ದಾರೆ. ಯಾವ ರೀತಿ ಸರ್ಕಾರ ಖಜಾನೆ ಕೊಳ್ಳೆಹೊಡದಿರುವುದು ಗೊತ್ತಾಗುತ್ತೆ. ಅಪ್ಪ‌ ಮಕ್ಕಳ ಕಾಟ, ಸೊಸೆಯಂದಿರ ಕಾಟ ಆಗಿ ಈಗ ಮೊಮ್ಮಕ್ಕಳ ಕಾಟ ಆರಂಭವಾಗಿದೆ ಎಂದು ದೇವೆಗೌಡರಿಗೆ ಟಾಂಗ್.ಕೊಟ್ಟರು

ಲೋಕಸಭಾ ಚುನಾವಣೆ ಮುಗಿದ‌ ಮೇಲೆ‌ ಅವರ ದಿನಗಳು ಕೊನೆಯಾಗುತ್ತಿವೆ.
ಇದಾದ ಬಳಿಕ ಅವರ ಭವಿಷ್ಯ ಎನಾಗುತ್ತೊ.
ಪುಲ್ವಾಮಾದಾಳಿ ಮೊದಲೇ ಗೊತ್ತಿತ್ತು ಅಂತಾ ಕುಮಾರಸ್ವಾಮಿ ಹೇಳುತ್ತಾರೆ.
ಅದನ್ನ ತಡೆಯಬಹುದಿತ್ತು ಇದು ಅಕ್ಷಮ್ಯ ಅಪರಾಧ ಎಂದು ಯಡಿಯೂರಪ್ಪ ಹೇಳಿದರು

ಬೇಜವಾಬ್ದಾರಿ ಮಂತ್ರಿ ಕರ್ನಾಟಕ ರಾಜ್ಯದಲ್ಲಿದ್ದಾರೆ. ಅಪ್ಪ ಮಕ್ಕಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.ಸರ್ಕಾರದ ಆಯಸ್ಸು ಮುಗಿಯಲು ಬಂದು ಕೋಮಾದಲ್ಲಿದೆ. ಕಾಶ್ಮೀರದಲ್ಲಿ 375ಕಲಂ ವಾಪಾಸ್ ಪಡೆದುಕೊಳ್ಳುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.ಕಿತ್ತೂರು ಪಟ್ಟಣದಲ್ಲಿ ಯಡಿಯೂರಪ್ಪ ಹೇಳಿದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *