ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ- ಯಡಿಯೂರಪ್ಪ ಆರೋಪ

ಬೆಳಗಾವಿಯಲ್ಲಿ ಬಿಎಸ್ ವೈ ಸುದ್ದಿಗೊಷ್ಠಿ

ಕರ್ನಾಟಕದ ಲ್ಲಿ ಏಕೀಕರಣದ ಆದ ಮೇಲೆ ಬೃಹತ್ ಹೋರಾಟ ನಡೆಯುತ್ತಿದೆ. ಸತ್ಯಾಗ್ರಹದಂತಹ ಪರಿಸ್ಥಿತಿ ಎಂದು ನಡೆದಿರಲಿಲ್ಲ.‌ಸಿಎಮ ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ ಈ ಹೋರಾಟಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದೀರಾ ಎಂದು ಮಾಧ್ಯಮ ದವರನ್ನು ಹಿಯಾಳಿಸಿರುವದು ಸರಿಯಲ್ಲ ಎಂದು ಬಿಎಸ್ ವೈ ಹೇಳಿದರು.
ಕುಮಾರಸ್ವಾಮಿ ಜಾತಿಯ ವಿಷ ಬೀಜ ಬಿತ್ತಿದ್ದಾರ.
೨ನೇ ತಾರೀಖು ಬಂದ್ ಮಾಡಬೇಡಿ. ೧೦೪ ಜನರು ಇರುವ ಪ್ರತಿಪಕ್ಷವಾಗಿ ಸದನದವಲ ಒಳಗೆ ಮತ್ತು ಹೊರಗೆ ಹೋರಾಟ ಮಾಡುವೆ. ಅಲೂರ ವೆಂಕಟರಾಯರು, ಫಗು ಹಳಕಟ್ಟಿ,ಕುವೆಂಪು, ಬೇಂದ್ರೆ, ಶಿವರಾಮ ಕಾರಂತರು ಹೋರಾಟ ಮಾಡಿ ಕರ್ನಾಟ ಕರ್ನಾಟಕ ಏಕೀಕರಣವಾಗಿದೆ.
ನಿಜಾಮರ ಆಡಳಿತ, ಮುಂಬೈ, ಮದ್ರಾಸ್, ಕೇರಳ ಪ್ರಾಂತ್ಯದ ಅನೇಕ ಕನ್ನಡ ಪ್ರದೇಶಗಳನ್ನು ಒಂದು ಮಾಡಲಾಗಿದೆ.
ಪ್ರಧಾನಿಯಾಗಿ ದೇವೇಗೌಡರು ಉತ್ತರ ಕರ್ನಾಟಕ ಕ್ಕೆ ನೀಡಿರುವ ಕೊಡುಗೆ ಏನು ಎಂದು ಬಿಎಸ್ ವೈ ಪ್ರಶ್ನಿಸಿದರು.
ಮಠಾಧೀಶರ ಮನವೊಲಿಸುವ ಬದಲು ಬೆಂಕಿ ಹಚ್ಚುವ ಕೆಲಸವನ್ನು ಸಿಎಂ ಮಾಡಿದ್ದಿರಾ ಎಂದು ಬಿಎಸ್ ಯಡಿಯೂರಪ್ಪ ಆರೋಪಿಸಿದರು.
ಕರ್ನಾಟಕದ ಜನತೆ ನಿಮ್ಮನ್ನು ಕ್ಣಮಿಸುವುದಿಲ್ಲ ಎಂದರು‌.
ಇಡೀ ರಾಜ್ಯಕ್ಕೆ ಅಕ್ಕಿ, ಬೆಳೆ, ವಿದ್ಯುತ್ ಸಿಗುವುದು ಉತ್ತರ ಕರ್ನಾಟಕ ದಿಂದ ಎಂದರು.
ಆಲಮಟ್ಟಿ ಅಣೆಕಟ್ಟು ಎತ್ತರ ಮಾಡುವ ಕಾಮಗಾರಿ ನೆನಗುದಿಗೆ ಬಿದ್ದಿದ್ದ. ‌ಹೈಕದಲ್ಲಿ
೪೦ ಸಾವಿರ ಹುದ್ದೆ ಖಾಲಿಯಿದ್ದರೂ, ೩-೪ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದೆ.
೯ ಕೋಟಿ ರು.ಗಳನ್ನು ಆಲಮಟ್ಟಿ ಆಣೆಕಟ್ಟುಯಿಂದ ಕೆಎಸ್ ಆರ್ ನ ಉದ್ಯಾನಕ್ಕೆ ಕಳುಹಿಸಿದ್ದು ಏಕೆ ಎಂದು ಸಿಎಮ್ ಉತ್ತರಿಸಬೇಕು ಎಂದು ಬಿಎಸ್ಬವೈ ಪ್ರಶ್ನಿಸಿದ್ದಾರೆ.ನಂಜುಂಡಪ್ಪ ವರದಿ ಮೂಲೆ ಗುಂಪಾಗಿದೆ.

ಶಾಸಕರಾದ ಉಮೇಶ ಕತ್ತಿ, ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ, ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಎ.ಎಸ್.ಪಾಟೀಲ‌ ನಡಹಳ್ಳಿ ಮತ್ತಿರರು ಇದ್ದರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *