Home / Breaking News / SSLC ಪರೀಕ್ಷೆ ಬರೆಯಲು ಚೆನ್ನೈ ಯಿಂದ ಮರಳಿದ, ಬಾಲಕನ ಮೇಲೆ ನಿಗಾ…!!

SSLC ಪರೀಕ್ಷೆ ಬರೆಯಲು ಚೆನ್ನೈ ಯಿಂದ ಮರಳಿದ, ಬಾಲಕನ ಮೇಲೆ ನಿಗಾ…!!

ಬೆಳಗಾವಿ- ಸರ್ಕಾರ SSLC ಪರೀಕ್ಷೆಯ ದಿನಾಂಕ ನಿಗದಿಪಡಿಸಿ,ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡ ಬೆನ್ನಲ್ಲಿಯೇ ಕಿತ್ತೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಅತ್ಯಂಕ ಕಳವಳಕಾರಿ ಸಂಗತಿಯೊಂದು ಇಂದು ಬೆಳಿಗ್ಗೆ ಹೊರಬಿದ್ದಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗೆ ಕೊರೊನಾ ಸೋಂಕು ಇರುವ ಶಂಕೆಯಿಂದ ಈ ವಿದ್ಯಾರ್ಥಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಗ್ರಾವೊಂದರ ಬಾಲಕನನ್ನು ಇಂದು ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಈ ಬಾಲಕ ಚೆನೈ ನಿಂದ ಗ್ರಾಮಕ್ಕೆ ಮರಳಿದ್ದ SSLC ಪರೀಕ್ಷೆ ಬರೆಯಲು ತನ್ನ ಗ್ರಾಮಕ್ಕೆ ಮರಳಿದ್ದ ಎಂದು ತಿಳಿದು ಬಂದಿದೆ.

ಲಾಕ್ ಡೌನ್ ಗೂ ಮುನ್ನ ಚೆನೈ ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ಹದಿನಾರು ವರ್ಷದ ಬಾಲಕ,
ಗ್ರಾಮಕ್ಕೆ ಬಂದ ಬಳಿಕ ಇಡೀ ಗ್ರಾಮದಲ್ಲಿ ಸುತ್ತಾಡಿದ್ದ ಎಂದು ಹೇಳಲಾಗಿದ್ದು,
ನಿನ್ನೆಯಷ್ಟೇ ಸಲೂನ್ ಗೆ ತೆರಳಿ ಕಟಿಂಗ್ ಮಾಡಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಬಾಲಕನನ್ನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು.
ಈ ಬಾಲಕನನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಚೆನ್ನೈ ಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಕಿತ್ರೂರು ತಾಲ್ಲೂಕಿನ ಗ್ರಾಮಕ್ಕೆ ಮರಳಿ ಬಂದಿರುವ ಬಾಲಕನನ್ನು ಕರೆದುಕೊಂಡು ಹೋಗಲು ಗ್ರಾಮದಲ್ಲಿ ಅಂಬ್ಯಲೆನ್ಸ್ ಬಂದ ಬಳಿಕ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು.

ಈ ಬಾಲಕನಿಗೆ ಸೊಂಕು ಇದೆಯೋ ? ಇಲ್ಲವೋ ? ಅನ್ನೋದು ಇನ್ನೂ ದೃಡವಾಗಿಲ್ಲ,ಕೊರೋನಾ ಸೊಂಕಿನ ಶಂಕೆ ಹಿನ್ನಲೆಯಲ್ಲಿ ಈ ಬಾಲಕನ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *