ಕೆಸರಿನ ಗದ್ದೆಯಲ್ಲಿ,ಓಟ,ಜಗ್ಗಾಟ,ಮೊಸರಿನ ಗಡಿಗೆ ಒಡೆಯುವ ನೋಟ ಅದ್ಭುತ…..!!

ಬೆಳಗಾವಿ- ಶಾಸಕ ಅಭಯ ಪಾಟೀಲ ಪ್ರತಿ ವರ್ಷ ಕೃಷ್ಣ ಜನ್ಮಾಷ್ಠಮಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.ಕೆಸರಿನ ಗದ್ದೆಯಲ್ಲಿ ಮೊಸರಿನ ಗಡಿಗೆ ಒಡೆಯುವ ಸ್ಥರ್ದೆಯ ಜೊತೆಗೆ ಇತರ ಸ್ಪರ್ದೆಗಳನ್ನು ಏರ್ಪಡಿಸುತ್ತಾರೆ.

ಬೆಳಗಾವಿಯ ರೂಪಾಲಿ ಚಿತ್ರಮಂದಿರದ ಬಳಿಯ ಪಾಟೀಲ ಮಾಳಾದಲ್ಲಿ ಶಾಸಕ ಅಭಯ ಪಾಟೀಲ ಅವರು ಇಂದು ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಕೆಸರಿನ ಗದ್ದೆಯಲ್ಲಿ ಓಟದ ಸ್ಪರ್ದೆ, ಹಗ್ಗ ಜಗ್ಗಾಟದ ಸ್ಪರ್ದೆ,ಜೊತೆಗೆ ಮೊಸರಿನ ಗಡಿಗೆ ಒಡೆಯುವ ಸ್ಪರ್ದೆ ಏರ್ಪಡಿಸಿದ್ದರು,ಈ ಸ್ಪರ್ದೆಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಅಲ್ಲಿ ಸೇರಿದ್ದರು,ನಗರದ ವಿವಿಧ ಯುವಕ ಮಂಡಳಗಳು ಈ ಸ್ಪರ್ದೆ ಗಳಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

ಓಟ,ಹಗ್ಗ ಜಗ್ಗಾಟ ಮುಗಿದ ಬಳಿಕ ಮೊಸರಿನ ಗಡಿಗೆ ಒಡೆಯುವ ಸ್ಪರ್ದೆ ಆರಂಭವಾಯಿತು,ಬೆಳಗಾವಿ ಹೊಸೂರಿನ ಯುವಕ ಮಂಡಳ ಮೊದಲ ಪ್ರಯತ್ನದಲ್ಲೇ ಮೊಸರಿನ ಗಡಿಗೆ ಒಡೆದು ಬಹುಮಾನ ಪಡೆಯಿತು.

ಹಗ್ಗ ಜಗ್ಗಾಟ,ಓಟದಲ್ಲಿ ವಿಜೇತರಾದ ತಂಡಗಳಿಗೂ ಬಹುಮಾನ ವಿತರಿಸಲಾಯಿತು.ಶಾಸಕ ಅಭಯ ಪಾಟೀಲ ಆಯೋಜಿಸಿದ್ದ ಈ ವಿಭಿನ್ನ ಕಾರ್ಯಕ್ರಮ ಜನರ ಮೆಚ್ಚುಗೆ ಗಳಿಸಿತು.

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *