ಹಣ್ಣು ಮಾರುತ್ತಿದ್ದ ಮಹಿಳೆಯ ಮೇಲೆ ಅಸೀಡ್ ದಾಳಿ….

ಬೆಳಗಾವಿ-ಹಣ್ಣು ಮಾರುತ್ತಿದ್ದ ಮಹಿಳೆಯ ಮೇಲೆ,ಅಸೀಡ್ ದಾಳಿ ನಡೆದಿದ್ದು,ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ರಾಯಬಾಗ ಪಟ್ಟಣದಲ್ಲಿ ಸಂಜೆ 7 ಗಂಟೆಗೆ ನಡೆದಿದೆ.

ರಾಯಬಾಗ ಪಟ್ಟಣದಲ್ಲಿರುವ ಜನದ ಕಟ್ಟೆಯಲ್ಲಿ ಹಣ್ಣು ಮಾರುತ್ತಿದ್ದ ಮಹಿಳೆಯ ಮೇಲೆ ಅಸೀಡ್ ದಾಳಿ ನಡೆದ ತಕ್ಷಣ ಪೋಲೀಸರು ಸ್ಥಳಕ್ಕೆ ಧಾವಿಸಿ ಅಸೀಡ್ ದಾಳಿಗೆ ತುತ್ತಾದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.ಸ್ಥಳೀಯ ವೈದ್ಯರ ಶಿಫಾರಸಿನ ಮೇರೆಗೆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಸೀಡ್ ದಾಳಿ ನಡೆದ ಒಂದು ಗಂಟೆಯ ಬಳಿಕ ಆರೋಪಿ,ಸ್ಥಳೀಯ ಪೋಲೀಸ್ ಠಾಣೆಗೆ ಶರಣಾಗಿ ಅಸೀಡ್ ದಾಳಿಯನ್ನು ನಾನೇ ಮಾಡಿದ್ದೇನೆ ಎಂದು ಒಪ್ಪಿಕೊಂಡು ತಾನು ವಿಷ ಸೇವಿಸಿರುವದಾಗಿ ಪೋಲೀಸರ ಬಳಿ ಹೇಳಿದ್ದರಿಂದ,ಆರೋಪಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆತನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಅಸೀಡ್ ದಾಳಿ ಮಾಡಿರುವದಾಗಿ ಹೇಳಿಕೊಂಡು, ಪೋಲೀಸ್ ಠಾಣೆಗೆ ಹಾಜರಾಗಿ,ಪೋಲೀಸರ ಬಳಿ ವಿಷ ಸೇವನೆ ಮಾಡಿರುವದಾಗಿ ಹೇಳಿಕೊಂಡಿರುವ ಆರೋಪಿ ಅಣ್ಣಪ್ಪಾ ಶೇಟ್ ಎಂಬಾತ ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *