Breaking News

ಸ್ವಾಮೀಜಿ ಆತ್ಮಹತ್ಯೆಗೆ ಕಾರಣವಾದ ಅಡಿಯೋ, ಇಬ್ಬರ ಮೇಲೆ ಬಿತ್ತು ಕೇಸ್…!!

ಬೆಳಗಾವಿ- ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲಿಯೇ ಇಬ್ಬರು ಮಹಿಳೆಯರು ಮಾತನಾಡಿದ ಅಡಿಯೋ ಸಖತ್ ವೈರಲ್ ಆಗಿತ್ತು.ಇಬ್ಬರು ಮಹಿಳೆಯರು ನಡುವೆ ಮೋಬೈಲ್ ನಲ್ಲಿ ನಡೆದ ಸಂಭಾಷಣೆ ನೇಗಿನಹಾಳದ. ಶ್ರೀಗಳ ಆತ್ಮಹತ್ಯೆಗೆ ಕಾರಣವಾಗಿತ್ತು.

ನಾನು ಬೆಳಗಾವಿಯಿಂದ ಸತ್ಯಕ್ಕ ಮಾತಾಡೋದು ಅಂತ ಶುರುವಾದ ಈ ಸಂಭಾಷಣೆಯಲ್ಲಿ ಈ ರಾಜ್ಯದ ಹಲವಾರು ಸ್ವಾಮೀಜಿ ಗಳ ನಡತೆಯ ಬಗ್ಗೆ ಚರ್ಚೆ ನಡೆದಿತ್ತು.ಇಬ್ಬರು ಮಹಿಳೆಯರ ನಡುವೆ ನಡೆದ ಈ ಸಂಭಾಷಣೆಯಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದ ಸ್ವಾಮೀಜಿಯ ಬಗ್ಗೆಯೂ ಚರ್ಚೆ ಆಗಿತ್ತು,ಸಂಭಾಷಣೆಯಲ್ಲಿ ನೇಗಿನಹಾಳ ಗ್ರಾಮದ ಸ್ವಾಮಿಜಿಯ ಬಗ್ಗೆ ಅವಮಾನಕರ ಸಂಭಾಷಣೆ ನಡೆದಿತ್ತು.ಈ ಅಡಿಯೋ ವೈರಲ್ ಆಗಿ,ಮನನೊಂದು ನೇಗಿನಹಾಳದ ಶ್ರೀಗಳು ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

ವೈರಲ್ ಆಗಿರುವ ಅಡಿಯೋದಲ್ಲಿ ಮಾತಾಡಿರುವ ಸತ್ಯಕ್ಕ ಮತ್ತು ರುದ್ರಮ್ಮ ಎಂಬುವವರ ವಿರುದ್ಧ ನೇಗಿನಹಾಳ ಶ್ರೀಗಳ ಭಕ್ತರು ಬೈಲಹೊಂಗಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸತ್ಯಕ್ಜ ಮೂಲತಹ ಧಾರವಾಡ ತಾಲ್ಲೂಕಿನವಳು,ರುದ್ರಮ್ಮ ಗಂಗಾವತಿ ಯವಳು ಎಂದು ತಿಳಿದು ಬಂದಿದೆ.ಇವರಿಬ್ಬರು ನೇಗಿನಹಾಳದ ಶ್ರೀಗಳ ಬಗ್ಗೆ ಹಗುರವಾಗಿ ಮಾತಾಡಿದ್ದು ಶ್ರೀಗಳ ಸಾವಿಗೆ ಅಡಿಯೋ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು ಇಬ್ಬರು ಮಹಿಳೆಯರ ವಿರುದ್ಧ ಈಗ ಕೇಸ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ‌.

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *