Breaking News

ಆನಂದ ಅಪ್ಪುಗೋಳ್ ಮನೆಗೆ ಸಾವಿರಾರು ಗ್ರಾಹಕರ ಮುತ್ತಿಗೆ,ಅಪ್ಪುಗೋಳ್ ಗೆ ದಿಗ್ಭಂಧನ

ಹನುಮಾನ ನಗರದ ಮನೆಯಲ್ಲಿ ಆನಂದ ಅಪ್ಪುಗೋಳ್ ಗೆ ಸಾವಿರಾರು ಗ್ರಾಹಕರಿಂದ ದಿಗ್ಭಂಧನ …..!!!

ಬೆಳಗಾವಿ- ಸಂಗೊಳ್ಳಿ ರಾಯಣ್ಣ ಸೊಸೈಟಿ ಯಲ್ಲಿ ಹಣ ಠೇವಣಿ ಮಾಡಿ ಕಂಗಾಲಾಗಿರುವ ಸಾವಿರಾರು ಜನ ಗ್ರಾಹಕರು ಹನುಮಾನ ನಗರದಲ್ಲಿರುವ ಆನಂದ ಅಪ್ಪುಗೋಳ್ ಮನೆ ಮೇಲೆ ದಾಳಿ ಮಾಡಿ ಅಪ್ಪುಗೋಳಗೆ ಮನೆಯಲ್ಲೇ ದಿಗ್ಭಂಧನ ಮಾಡಿದ್ದಾರೆ
ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಗ್ರಾಹಕರು ಅಪ್ಪುಗೋಳ ಮನೆಗೆ ಮುತ್ತಿಗೆ ಹಾಕಿ ಅಪ್ಪುಗೋಳ್ ಹೊರಗೆ ಬಾ ಎನ್ನುವ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ

ಸುಮಾರು ಮೂರು ಸಾವಿರಕ್ಕೂ ಹೆಚ್ಚು ಠೇವಣಿದಾರರು ಅಪ್ಪುಗೋಳ್ ಮನೆಯನ್ನು ಅಪ್ಪಿಕೊಂಡಿದ್ದು ಘಟನಾ ಸ್ಥಳಕ್ಕೆ ಪೋಲೀಸರು ದೌಡಾಯಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದು ಗ್ರಾಹಕರು ಅಪ್ಪುಗೋಳನನ್ನು ಮನೆಯಿಂದ ಹೊರಗೆ ಕಳುಹಿಸುವಂತೆ ಪಟ್ಟು ಹಿಡಿದಿದ್ದಾರೆ

ರಾಯಣ್ಣ ಸೊಸೈಟಿಯಲ್ಲಿ ಕೋಟ್ಯಾಂತರ ರೂಪಾಯಿಯ ವಂಚನೆ ಮಾಡಿದ ಆರೋಪದ ಮೇಲೆ ಸೊಸೈಟಿ ಯ ಚೇರಮನ್ ಆನಂದ ಅಪ್ಪುಗೋಳ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದು ಗ್ರಾಹಕರು ಈಗ ಅಪ್ಪುಗೋಳ್ ಮನೆಗೆ ಮುತ್ತಿಗೆ ಹಾಕಿ ತಮ್ಮ ಠೇವಣಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ

Check Also

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ.ನಾನು ಆಂಕಾಂಕ್ಷಿಯೂ ಅಲ್ಲ,ಸ್ಪರ್ದೆಯೂ ಮಾಡೋದಿಲ್ಲ…

ಬೆಳಗಾವಿ-ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ …

Leave a Reply

Your email address will not be published. Required fields are marked *