ಮಹಾದಾಯಿ ಕುರಿತು ಕೇಂದ್ರದಿಂದ ಸಿಹಿ ಲೇಪಿತ ಕಹಿ ಗುಳಿಗೆ – ಅಶೋಕ ಚಂದರಗಿ

ಮಹಾದಾಯಿ ವಿಷಯದಲ್ಲಿ ಕೇಂದ್ರ ಸರಕಾರವು ಮತ್ತೊಮ್ಮೆ ಕರ್ನಾಟಕದ ಜನತೆಯ ಕಣ್ಣುಗಳಲ್ಲಿ ಮಣ್ಣು ಹಾಕಿದೆ.ಸಿಹಿ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಮುಂಬಯಿ ಕರ್ನಾಟಕದ ಜನತೆಗೆ ಸಿಹಿ ಲೇಪಿತ ಕಹಿ ಗುಳಿಗೆಯನ್ನು ನೀಡಿದೆ.ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅಸಮಾಧಾನ ವ್ಯೆಕ್ತಪಡಿಸಿದ್ದಾರೆ.

ಕಳೆದ ಅಕ್ಟೋಬರನಲ್ಲಿ ನೀಡಿದ್ದ ಪರಿಸರ ಇಲಾಖೆಯ ಅನುಮತಿಯನ್ನು ಗೋವೆಯ ಒತ್ತಡದಿಂದಾಗಿ ತಡೆಹಿಡಿದಿದ್ದ ಪರಿಸರ ಖಾತೆಯ ಸಚಿವ ಪ್ರಕಾಶ ಜಾವಡೇಕರ ಅವರು ಈಗ ಅರಣ್ಯ ಮತ್ತು ವನ್ಯಜೀವಿ ಇಲಾಖೆಗಳ ಅನುಮತಿ ಪಡೆದುಕೊಂಡ ನಂತರ ಮಹಾದಾಯಿ ಯೋಜನೆಯನ್ನು ಅನುಷ್ಠಾನ ಮಾಡಬಹುದು ಎಂದು ತಿಳಿಸಿದ್ದು ಅತ್ಯಂತ ಹಾಸ್ಯಾಸ್ಪದವಾಗಿದೆ.
ಅರಣ್ಯ ಇಲಾಖೆಯ ಅನುಮತಿ ನೀಡುವವರು ಲಂಡನ್,ಅಮೇರಿಕೆಯಲ್ಲಿ ಇದ್ದಾರೆಯೆ? ಜಾವಡೇಕರ ಅವರು ಯಾರನ್ನು ಮೋಸ ಮಾಡಬೇಕೆಂದಿದ್ದಾರೆ? ಕರ್ನಾಟಕದ ಮಂತ್ರಿಗಳಾದ ಸುರೇಶ ಅಂಗಡಿ ಮತ್ತು ಪ್ರಲ್ಹಾದ ಜೋಶಿ ಅವರನ್ನು ಅಸ್ಪೃಶ್ಯರಂತೆ ನೋಡಿಕೊಳ್ಳುತ್ತಿರುವ ಕೇಂದ್ರ ಸರಕಾರ ಈ ಉಭಯ ಸಚಿವರನ್ನು ಲೆಕ್ಕಕ್ಕೇ ತೆಗೆದುಕೊಳ್ಳದಿರುವದು ಸ್ಪಟಿಕದಷ್ಟೇ ಸ್ಪಷ್ಟ ಎಂದು ಅಶೋಕ ಚಂದರಗಿ ಅಭಿಪ್ರಾಯ ವ್ಯೆಕ್ತ ಪಡಿಸಿದ್ದಾರೆ.

ಕೇಂದ್ರದ ಮೇಲೆ ಒತ್ತಡ ತರಲು ವಿಫಲರಾಗುತ್ತಿರುವ ಅಂಗಡಿ ಮತ್ತು ಜೋಷಿ ಅವರು ಭಾಗವಹಿಸುವ ಅಧಿಕೃತ ಕಾರ್ಯಕ್ರಮಗಳಲ್ಲಿ ಮಹಾದಾಯಿ ಹೋರಾಟಗಾರರು ಪ್ರತಿಭಟನೆ ನಡೆಸುವ
ಕಾಲ ದೂರವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹಾದಾಯಿ ಮತ್ತು ಕೃಷ್ಣಾ ಜಲವಿವಾದಗಳ ಸಂಬಂಧ ಕೇಂದ್ರ ಸರಕಾರದ ,ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ತಿಕೆಗೆ ಆಗ್ರಹಿಸಬೇಕು.ಸರ್ವ ಪಕ್ಷಗಳ,ಮಹಾದಾಯಿ ಹೋರಾಟಗಾರರ ನಿಯೋಗವನ್ನು ದಿಲ್ಲಿಗೆ ಕರೆದೊಯ್ಯಬೇಕು. ಅಶೋಕ ಚಂದರಗಿ,ಒತ್ತಾಯಿಸಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *