Breaking News
Home / BGAdmin (page 28)

BGAdmin

ಸಿಎಂ ನೇತೃತ್ವದ ಸಚಿವರ ಬ್ರೇಕ್‌ಫಾಸ್ಟ್ ಸಭೆಗೆ ನನಗೆ ಆಹ್ವಾನವೇ ಬಂದಿಲ್ಲ.

ಬೆಳಗಾವಿ: ಸಿಎಂ ನೇತೃತ್ವದ ಸಚಿವರ ಬ್ರೇಕ್‌ಫಾಸ್ಟ್ ಸಭೆಗೆ ನನಗೆ ಆಹ್ವಾನವೇ ಬಂದಿಲ್ಲ ಎಂದು ಬೆಳಗಾವಿಯಲ್ಲಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಸ್ಪಷ್ಟನೆ ನೀಡಿದರು‌. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭೆಗೆ ನನಗೆ ಆಹ್ವಾನ ಇರಲಿಲ್ಲ, ಹುಷಾರೂ ಇರಲಿಲ್ಲ.ಹೀಗಾಗಿ ಸಿಎಂ ಕರೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ನಾನು ಭಾಗಿಯಾಗಿಲ್ಲ ಎಂದು ಸಿಎಂ ಬ್ರೇಕ್‌ಫಾಸ್ಟ್ ಸಭೆಗೆ ಗೈರಾಗಿದಕ್ಕೆ ಡಾ. ಶರಣಪ್ರಕಾಶ ಪಾಟೀಲ ಸ್ಪಷ್ಟನೆ ಕೊಟ್ಟರು‌. ಅವಕಾಶ ಕೊಟ್ಟರೆ ನಾನೂ ಸಿಎಂ ಆಗ್ತಿನಿ ಎಂಬ …

Read More »

ಸಿಎಂ ಮಾದ್ಯಮ ಸಲಹೆಗಾರ ಪ್ರಭಾಕರ ಬೆಳಗಾವಿಗೆ ಬರ್ತಾರೆ…!!

ಬೆಳಗಾವಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನ. 11 ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ತಿಳಿಸಿದರು. ನಗರದಲ್ಲಿ ಶುಕ್ರವಾರ ಕೆಯುಡಬ್ಲ್ಯುಜೆ ಜಿಲ್ಲಾ ಘಟಕದ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ವೇಳೆ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಮಹನೀಯರನ್ನು ಕೂಡ ಸನ್ಮಾನಿಸಲಾಗುವುದು ಎಂದು ಹೇಳಿದರು. ಇಡೀ …

Read More »

ಬೆಳಗಾವಿ: ಹಾಸಿಗೆಯಲ್ಲೇ ಗಂಡ ಖಲ್ಲಾಸ್ …..!!!

ಬೆಳಗಾವಿ-ರಾತ್ರಿ ಮಲಗಿದ್ದಾಗ ಪಕ್ಕದಲ್ಲೇ ಮಲಗಿದ್ದ ಗಂಡನ ಕತ್ತು ಹಿಸುಕಿ .ಕೊಲೆ ಮಾಡಿದ ಹೆಂಡತಿ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾಳೆ. ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಬಳಿಕ ಕತ್ತು ಹಿಸುಕಿ ಗಂಡನ ಕೊಲೆ ಮಾಡಿಬಳಿಕ ಸಹಜ ಸಾವು ಎಂದು ಕಥೆ ಕಟ್ಟಿದ್ದ ಐನಾತಿ ಹೆಂಡತಿಯ ಬಣ್ಣ ಬಯಲಾಗಿದೆ.ಬಾಬು ಕಲ್ಲಪ್ಪ ಕರ್ಕಿ(೪೮) ಮೃತ ದುರ್ದೈವಿಯಾಗಿದ್ದಾನೆ. ಮಹಾದೇವಿ ಬಾಬು ಕರ್ಕಿ ಗಂಡನನ್ನ ಕೊಲೆ ಮಾಡಿದ ಹೆಂಡತಿ.ಈ ಘಟನೆ ನಡೆದಿದ್ದುಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ …

Read More »

ಎಂಇಎಸ್ ನಾಯಕರ ವಿರುದ್ಧ ಕೇಸ್….

ಬೆಳಗಾವಿ-ಕರಾಳ‌ ದಿನ ಆಚರಿಸಿದ ನಾಡದ್ರೋಹಿ ‌ಎಂಇಎಸ್‌ ನಾಯಕರಿಗೆ ಬೆಳಗಾವಿ ಪೊಲೀಸರ ‌ಶಾಕ್ ಕೊಟ್ಟಿದ್ದಾರೆ.ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ‌ ದಿನ ಆಚರಿಸಿ ಉದ್ಧಟತನ ಪ್ರದರ್ಶಿಸಿದ್ದ ಎಂಇಎಸ್‌ ನಾಯಕರ ವಿರುದ್ಧ ಕೇಸ್ ಹಾಕಿದ್ದಾರೆ. ಕರಾಳ ದಿನ ಆಚರಿಸಿದ 18 ಎಂಇಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಿರುವ ಬೆಳಗಾವಿ ಪೋಲೀಸರು.ಅನುಮತಿ ಇಲ್ಲದೇ ಕರಾಳ ದಿನ ಆಚರಿಸಿದ ಪುಂಡರ ವಿರುದ್ಧ.ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ. ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಮೆರೆದಿದ್ದ ನಾಡದ್ರೋಹಿಗಳು,ಅನುಮತಿ …

Read More »

ಮನೆ ಮುಂದೆ ಕನ್ನಡಜ್ಯೋತಿ ಬೆಳಗಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ

ಬೆಳಗಾವಿ, : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಸಾರ್ವಜನಿಕರು ಮನೆಗಳ ಮುಂದೆ ರಂಗೋಲಿ ಹಾಕಿ, ಗಾಳಿಪಟಗಳನ್ನು ಹಾರಿಸಿ, ಹಣತೆ ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸುವುದರೊಂದಿಗೆ ಸಂಭ್ರಮವನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿಕೊಂಡಿದ್ದಾರೆ. ನವೆಂಬರ್ 1 ರಂದು ಜಿಲ್ಲೆಯ ಎಲ್ಲರೂ ತಮ್ಮ ಮನೆಗಳ ಮುಂದೆ ಕೆಂಪು ಮತ್ತು …

Read More »

ಬೆಳಗಾವಿಯಲ್ಲಿ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗ..

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ,ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ. ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಯದಲ್ಲಿ ರಾಜ್ಯಪಾಲರ ಭೇಟಿಗೆ ವಿಲ್ ಚೇರ್ ನಲ್ಲಿ ಬಂದ ಮೇಯರ್ ಶೋಭಾ ಸೋಮನಾಚೆ.ಬೆಳಗಾವಿ ವಿಟಿಯು ಗೆಸ್ಟ್ ಹೌಸ್ ನಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭೇಟಿಯಾಗಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ದೂರು ಸಲ್ಲಿಸಿದ್ದಾರೆ. ಶಾಸಕ …

Read More »

ಕ್ವಿಕ್ ರಿಸ್ಪಾನ್ಸ್…..ಒಂದೇ ದಿನದಲ್ಲಿ ಸಮಸ್ಯೆಗೆ ಪರಿಹಾರ..

ಬೇಡಿಕೆ ಮಂಡಿಸಿದ ಒಂದೇ ದಿನಕ್ಕೆ ಅನುದಾನ ಹಂಚಿದ ಸಚಿವ ಜಾರಕಿಹೊಳಿ ಹುಕ್ಕೇರಿ : ಬೇಡಿಕೆ ಮಂಡಿಸಿದ ಒಂದೇ ದಿನದಲ್ಲಿ ಅನುದಾನ ಹಂಚಿಕೆ ಮಾಡುವ ಮೂಲಕ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ತಮ್ಮದು ವಿಭಿನ್ನ ವರ್ಕಿಂಗ್ ಸ್ಟೈಲ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಬೆಂಗಳೂರಿನ ನ್ಯಾಯವಾದಿಗಳ ನಿಯೋಗವು ಸಿವಿಲ್ ಕೋರ್ಟ್ ನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗುರುವಾರ ಮಧ್ಯಾಹ್ನ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ನ್ಯಾಯವಾದಿಗಳ …

Read More »

ಹುಲಿ ಉಗುರು…ಉಳ್ಳವರಿಗೆ ಬೆವರು..ಅರಣ್ಯ ಅಧಿಕಾರಿಗಳ ಖದರು…!!

ಬೆಳಗಾವಿ- ಹಳ್ಳಿಯಲ್ಲಿ ಹುಲಿ ಉಗುರು ಕೊರಳಲ್ಲಿ ಹಾಕಿಕೊಂಡವನೇ ಸಾಹುಕಾರ್ ಎನ್ನುವ ಪ್ರತೀತಿಯಿದೆ. ಹೀಗಾಗಿ ಉಳ್ಳವರು ಇದನ್ನು ಧರಿಸಿ ಫೋಸ್ ಕೊಡುವದು ಹೊಸದೇನಲ್ಲ.ಆದ್ರೆ ಇದೇ ಹುಲಿ ಉಗುರು ಈಗ ಉಳ್ಳವರ ಬೆವರು ಇಳಿಸುತ್ತಿರುವದು ಸತ್ಯ. ರಾಜಕಾರಣಿಗಳ ಮಕ್ಕಳೂ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡು ಶೋ ಮಾಡ್ತಿದ್ದವರು ಇದೀಗ ಸೈಲೆಂಟ್ ಆಗಿದ್ದಾರೆ. ಅವನು ನಾನಲ್ಲ,ಅದು ನನ್ನದಲ್ಲ.ಯಾರೋ ಗಿಫ್ಟ್ ಕೊಟ್ಟಿದ್ದು,ಇನ್ನೂ ಅದು ಹುಲಿ ಉಗುರಿನ ಪೆಂಡೆಂಟ್ ಅಲ್ಲಾ ಪ್ಲಾಸ್ಟಿಕ್ ದ್ದು ಅಂತಾ ಹೇಳ್ತಿದ್ದಾರೆ.ಆದ್ರೇ …

Read More »

ಹಚ್ಚೇವು ಕನ್ನಡದ ದೀಪ” ಹಾಡನ್ನೂ ಸಹ ಸೇರಿಸಿ…..

ಬೆಳಗಾವಿ:27:ಕರ್ನಾಟಕನಾಮಕರಣದಐವತ್ತು ವರ್ಷಗಳ ವರ್ಷಾಚರಣೆಸಂದರ್ಭದಲ್ಲಿ ರಾಜ್ಯಾದ್ಯಂತ ನಡೆಯುವನುಡಿ ನಮನದ ಗೀತ ಗಾಯನದಲ್ಲಿಖ್ಯಾತ ಕವಿ ಡಿ.ಎಸ್.ಕರ್ಕಿಯವರ”ಹಚ್ಚೇವು ಕನ್ನಡದ ದೀಪ” ಹಾಡನ್ನೂ ಸಹಸೇರಿಸಬೇಕೆಂದು ಬೆಳಗಾವಿ ಜಿಲ್ಲೆಯಸಾಹಿತಿಗಳು ಇಂದು ಜಿಲ್ಲಾಧಿಕಾರಿಗಳಮೂಲಕ ಮುಖ್ಯಮಂತ್ರಿ,ಉಪಮುಖ್ಯಮಂತ್ರಿಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಚಿವರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರಕಾರ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ಹುಯಿಲಗೋಳನಾರಾಯಣರಾಯರ ” ಉದಯವಾಗಲಿ ನಮ್ಮ ಚೆಲುವು ಕನ್ನಡ ನಾಡು”,ಕುವೆಂಪು ಅವರ ” ಎಲ್ಲಾದರೂ ಇರು,ಎಂತಾದರೂ ಇರು”,ದ.ರಾ.ಬೇಂದ್ರೆಯವರ ” ಒಂದೇ ಒಂದೇ ಕರ್ನಾಟಕ ಒಂದೇ”,ಸಿದ್ದಯ್ಯ ಪುರಾಣಿಕರ “ಹೊತ್ತಿತೊ ಹೊತ್ತಿತು …

Read More »

ಬೆಳಗಾವಿಯಲ್ಲಿ ಪಾಲಿಟೀಕಲ್ ವಲ್ಡ್ ವಾರ್….!!

ಬೆಳಗಾವಿ-ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ನಡುವಿನ ರಾಜಕೀಯ ಸಮರ ಮುಂದುವರೆದಿದೆ. ಈ ಸಮರ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ರಾಜಕೀಯ ಕಾಳಗ ಅಲ್ಲ ಇದೊಂದು ಬೆಳಗಾವಿ ಜಿಲ್ಲೆಯ ಪಾಲಿಟೀಕಲ್ ವಲ್ಡ್ ವಾರ್ ಎನ್ನುವದರಲ್ಲಿ ಅನುಮಾನವೇ ಇಲ್ಲ. ಸ್ಮಾರ್ಟ್ ಸಿಟಿ,ಬುಡಾ ನಿವೇಶನ ಹಂಚಿಕೆ, ಮತ್ತು ಮಹಾನಗರ ಪಾಲಿಕೆಯಲ್ಲಿ ಶಾಸಕ ಅಭಯ ಪಾಟೀಲ ಬ್ರಷ್ಟಾಚಾರ ಮಾಡಿದ್ದಾರೆ ಎನ್ನುವದು ಸಚಿವ …

Read More »