ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ..,ಯತ್ನಾಳಗೌಡ್ರ ವಿಶ್ವಾಸ.‌‌‌ !

ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ,ಯತ್ನಾಳಗೌಡ್ರ ವಿಶ್ವಾಸ.‌‌‌

ಧಾರವಾಡ- ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ ಎಂದು ಧಾರವಾಡದಲ್ಲಿ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಮೇಶ ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆಂಬ ವಿಚಾರವಾಗಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ,ಆದಷ್ಟು ಬೇಗ ಅವರು ಮಂತ್ರಿ ಆಗ್ತಾರೆ,ಅವರಿಗೆ ಎಲ್ಲ ಭವಿಷ್ಯ ಬಿಜೆಪಿದಲ್ಲಿಯೇ ಇದೆ,ಬಿಜೆಪಿ ಬಿಟ್ಟರೆ ಜೆಡಿಎಸ್‌ನಿಂದ ಏನು ಆಗುವುದಿದೆ? ಅವರು ಬಿಜೆಪಿ ಬಿಟ್ಟು ಹೋಗೋದಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ರು.

ಮಂತ್ರಿ ಮಂಡಲ ಈಗಲೂ ಪುನರ್ ರಚನೆ ಆಗಬಹುದು,ಆದರೆ ನಾನು ಆಕಾಂಕ್ಷಿ ಇಲ್ಲ,ಆದರೆ ಜಾರಕಿಹೊಳಿಯವರದ್ದೇ‌ ಮೊದಲ ಹೆಸರು ಇದೆ ಅವರು ಮಂತ್ರಿ ಆಗ್ತಾರೆ ಎಂದು ಯತ್ನಾಳಗೌಡ್ರು ಹೇಳಿದ್ರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *