ಕುಮಾರ್ ಸ್ವಾಮಿಗೆ ಬೆಳಗಾವಿಯಲ್ಲಿ ಸುಮಾರ್ ಸ್ವಾಮಿ ಅಂದ್ರು…!!

ಬೆಳಗಾವಿ-ಮಾಜಿ‌ ಸಿಎಂಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.ಬೆಳಗಾವಿಯಲ್ಲಿ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ ನಡೆದಿದೆ‌.ಬೆಳಗಾವಿ ಆರ್‌ಪಿಡಿ ವೃತ್ತದಲ್ಲಿ ರಸ್ತೆ ಬಂದ ಮಾಡಿ, ಭಾವಚಿತ್ರ ದಹಿಸಿ ಪ್ರತಿಭಟನೆ ನಡೆಸಿದ

ಬ್ರಾಹ್ಮಣ ಸಮಾಜದ ಮುಖಂಡ ಆರ್.ಎಸ್.ಮುತಾಲಿಕ, ಬಿಜೆಪಿ ಪಾಲಿಕೆ ಸದಸ್ಯೆ ವಾಣಿ ಜೋಶಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಂದ ಬ್ರಾಹ್ಮಣ ಸಮಾಜ ನಿಂದನೆ ಖಂಡಿಸಿ ಆಕ್ರೋಶ ವ್ಯಕ್ತವಾಗಿದೆ.ಸಿದ್ದರಾಮಯ್ಯ, ಕುಮಾರಸ್ವಾಮಿ ಭಾವಚಿತ್ರಕ್ಕೆ ಧಿಕ್ಕಾರ ಚಿನ್ಹೆ ಹಾಕಿ ಕಿಡಿ ಕಾರಿದ್ದಾರೆ.ಕುಮಾರಸ್ವಾಮಿ ಅವರನ್ನು ಸುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನ ಸಿದ್ದರಾಮುಲ್ಲಾ ಅಂತಾ ಬಿತ್ತಿಪತ್ರ ಹಿಡಿದು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಪ್ರಹ್ಲಾದ್ ಜೋಶಿ ಸಿಎಂ ಆಗ್ತಾರೆಂದ ಹೇಳಿ ಬ್ರಾಹ್ಮಣ ಸಮಾಜವನ್ನ ನಿಂದಿಸಿದ್ದಾರೆ,ತಕ್ಷಣವೇ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಕ್ಷಮೆಯಾಚನೆ ಮಾಡಲು ಒತ್ತಾಯ ಮಾಡಲಾಗಿದೆ.ರಾಜಕೀಯ ಟೀಕೆಗಳನ್ನ ಮಾಡಲಿ, ಆದ್ರೆ ವೈಯಕ್ತಿಕ ಮತ್ತು ಸಮಾಜದ ನಿಂದನೆ ಸಹಿಸುವುದಿಲ್ಲ,ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್ಡಿಕೆಗೆ ಬ್ರಾಹ್ಮಣ ಸಮುದಾಯ ಎಚ್ಚರಿಕೆ ನೀಡಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *