Breaking News

ಕಬ್ಬಿನ ಬಿಲ್ ಬಾಕಿ, ಬೆಳಗಾವಿ ಸಕ್ಕರೆ ಸಂಸ್ಥೆಗೆ ಬೀಗ ಜಡಿದ ರೈತರು…

ಬೆಳಗಾವಿ-ಬೆಳಗಾವಿಯ ಸಕ್ಕರೆ ಸಂಸ್ಥೆಯಸಿಬ್ಬಂದಿಗಳನ್ನು ಹೊರದಬ್ಬಿ ನಿಜಲಿಂಗಪ್ಪ ‌ಸಕ್ಕರೆ ಸಂಸ್ಥೆಗೆ ಬೀಗ ಜಡಿದ ರೈತ ಹೋರಾಟಗಾರರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಬೆಳಗಾವಿಯ ಗಣೇಶಪುರ ರಸ್ತೆಯಲ್ಲಿರುವ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬೀಗ ಜಡಿದು ರೈತರ ಆಕ್ರೋಶ ವ್ಯಕ್ತಪಡಿಸಿದ್ದುಕಬ್ಬಿನ ಬಾಕಿ ಬಿಲ್ ಪಾವತಿಸಲು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ರಾಮದುರ್ಗ ತಾಲೂಕಿನ ಶಿವಸಾಗರ, ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ಸ್‌ ಕಾರ್ಖಾನೆಯ ಆಡಳಿತ ಮಂಡಳಿಗಳು ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ.
600 ಕ್ಕೂ ಅಧಿಕ ರೈತರಿಗೆ ಬರಬೇಕಿದೆ 8 ಕೋಟಿ ರೂ ಗಿಂತ ಹೆಚ್ಚು ಬಾಕಿ ಹಣ ಪಾವತಿಯಾಗಿಲ್ಲ,ಬಾಕಿ ಬಿಲ್ ಕೊಡಿಸುವಂತೆ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಯುಕ್ತರ ಮೊರೆ ಹೊಗಿದ್ದ ರೈತರು,ಆಯುಕ್ತರು ಯಾವುದೇ ಕ್ರಮ ಜರುಗಿಸದ ಕಾರಣ ಈಗ ಸಕ್ಕರೆ ಸಂಸ್ಥೆಗೆ ಬೀಗ ಜಡಿದು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ರೈತರಿಗೆ ನೋಟಿಸ್ ನೀಡಿ ಇಂದು ಮಧ್ಯಾಹ್ನ 12 ಕ್ಕೆ ವಿಚಾರಣೆಗೆ ಆಹ್ವಾನಿಸಿದ್ದ ಕಮೀಷ್ನರ್ ಶಿವಾನಂದ ಕಲಕೇರಿ,ನೋಟಿಸ್ ಹಿನ್ನಲೆಯಲ್ಲಿ ಸಕ್ಕರೆ ಸಂಸ್ಥೆ ಕಚೇರಿಗೆ ನಿಗದಿತ ಸಮಯಕ್ಕೆ ರೈತರು ಬಂದರೂ ಕಚೇರಿಗೆ ಆಯುಕ್ತರು ಬಾರದ ಕಾರಣ,ವಿವಿಧ ಸಂಘಟನೆಗಳ ರೈತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.

Check Also

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮರ್ಡರ್…

ಬೆಂಗಳೂರು-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ …

Leave a Reply

Your email address will not be published. Required fields are marked *