Breaking News
Home / Breaking News / ಬೆಳಗಾವಿ ಪಾಲಿಟೀಕ್ಸ್ ದಲ್ಲಿ, ಜೈ ..‌‌ಜಗದೀಶ….ಹರೇ…..!!!!

ಬೆಳಗಾವಿ ಪಾಲಿಟೀಕ್ಸ್ ದಲ್ಲಿ, ಜೈ ..‌‌ಜಗದೀಶ….ಹರೇ…..!!!!

ಬೆಳಗಾವಿ- ರಾಜಕಾರಣ ನಿಂತ ನೀರು ಅಲ್ಲ.ಇಲ್ಲಿ ಗುಣಾಕಾರ ಭಾಗಾಕಾರದ ಲೆಕ್ಕ ನಡೆಯೋದಿಲ್ಲ.ಇಲ್ಲಿ ಏನಿದ್ರೂ ಜಾಕ್ ಪಾಟ್ ಆಟ ಅನ್ನೋದು ಮತ್ತೊಮ್ಮೆ ಸಾಭೀತಾಗಿದೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ಸು ಬಂದಿರುವ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶ್ರಮ ವರ್ಕೌಟ್ ಆಗಿದೆ ಜಾರಕಿಹೊಳಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ.ರಮೇಶ್ ಜಾರಕಿಹೊಳಿ ಆಡಿದ ಆಟ ಬೆಳಗಾವಿ ಜಿಲ್ಲೆಯ ರಾಜಕಾರಣದ ಚಿತ್ರಣವನ್ನು ಬದಲಿಸಿದೆ.

ಬೆಳಗಾವಿ ಜಿಲ್ಲೆಗೂ ಜಗದೀಶ್ ಶೆಟ್ಟರ್ ಅವರಿಗೂ ಅಂಡರ್ ಕರೆಂಟ್ ಸಂಬಂಧ ಇದೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಸೇರ್ಪಡೆಯಾದ ವಿಚಾರ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್ ಕೊಟ್ಟಿದೆ. ಯಾಕಂದ್ರೆ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅಂಗಡಿ ಕುಟುಂಬದವರಿಗೆ ಕೊಡಬೇಕು ಎನ್ನುವ ಕಂಡೀಶನ್ ಹಾಕಿದ್ದಾರೆ ಎನ್ನುವ ಸುದ್ದಿ ಈಗ ಫುಲ್ ಹೈಲೈಟ್ ಆಗಿದೆ.ಬಿಜೆಪಿ ಪಾಳೆಯದಲ್ಲಿ ಲೋಕಸಭಾ ಚುನಾವಣೆಯ ಅಸಲಿ ಆಟ ಇವತ್ತಿನಿಂದ ಶುರುವಾಗಿದೆ.

ಜಗದೀಶ್ ಶೆಟ್ಟರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋದಾಗಿನಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಶೆಟ್ಟರ್ ಹಿಂದೆ ಬಿದ್ದಿದ್ದರು.ರಮೇಶ್ ಜಾರಕಿಹೊಳಿ ಅವರು ಶೆಟ್ಟರ್ ಜೊತೆ ಚಾಹ ಪೇ ಚರ್ಚಾ ಮಾಡಿದ ಪೋಟೋಗಳು ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದವು ಆದ್ರೆ ಫುಲ್ ಪಿಕ್ಚರ್ ಇವತ್ತು ರಿಲೀಸ್ ಆಗಿದೆ.

ಜಗದೀಶ್ ಶೆಟ್ಟರ್ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡ್ತಾರೆ,ಜೊತೆಗೆ ಬೆಳಗಾವಿಯ ಬೀಗರಿಗೆ ಶೆಟ್ಟರ್ ಟಿಕೆಟ್ ಕೊಡಿಸೋದು ಪಕ್ಕಾ ಎನ್ಬುವ ಮಾತುಗಳು ಕೇಳಿ ಬರುತ್ತಿವೆ.ಜೊತೆಗೆ ಸ್ವತಃ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡುವ ಸಾಧ್ಯತೆಯೂ ಇದೆ ಎನ್ನುವ ಚರ್ಚೆ ಈಗ ಶುರುವಾಗಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃನಾಲ ಹೆಬ್ಬಾಳಕರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆ ಹೊರಬಿದ್ದ ಬಳಿಕ ಶೆಟ್ಟರ್ ಬಿಜೆಪಿಗೆ ರಿಟರ್ನ್ ಆಗಿದ್ದು ವಿಶೇಷವಾಗಿದ್ದು. ಶೆಟ್ಟರ್ ಆಗಮನ ಬೆಳಗಾವಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಕೆಲವರಿಗೆ ಖುಷಿ ತಂದಿದ್ದು ಕೆಲವರಿಗೆ ಬಿಸಿ ತಟ್ಟಿಸಿದ್ದು ಸತ್ಯ.ಒಟ್ಟಾರೆ ರಮೇಶ್ ಜಾರಕಿಹೊಳಿ ಅವರು ಆಡಿದ ಅಚ್ಚರಿ ಫಲಿತಾಂಶ ನೀಡಿದೆ.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *