Breaking News

ಐದು ಜನ ಹೋರಾಟಗಾರರು ಐವರು ಹಿರಿಯ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಗೌರವ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದಾರೆ ಈ ವರ್ಷ ರಾಜ್ಯೋತ್ಸವದ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಐವರು ಕನ್ನಡ ಹೋರಾಟಗಾರರನ್ನು ಮತ್ತು ಐವರು ಹಿರಿಯ ಪತ್ರಕರ್ತರಿಗೆ ಕನ್ನಡದ ಸಮ್ಮಾನ ನೀಡಲಿದೆ

ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರರಾದ ರಾಮಚಂದ್ರ ಢವಳಿ,ಜೋರಾಪೂರೆ,ಶಿವಪ್ಪ ಕೋರವಾರ,ಕಸ್ತೂರಿ ಭಾವಿ ,ಮೈನೋದ್ದೀನ್ ಮಕಾನದಾರ ಅವರನ್ನು ಜಿಲ್ಲಾಡಳಿತದಿಂದ ರಾಜ್ಯೋತ್ಸವದ ದಿನ ಸತ್ಕರಿಸಲಾಗುತ್ತಿದೆ

ಕಳೆದ 71 ವರ್ಷದಿಂದ ಬೆಳಗಾವಿಯಲ್ಲಿ ಕನ್ನಡದ ಸೇವೆ ಮಾಡುತ್ತಿರುವ ಜನಜೀವಾಳ ಪತ್ರಿಕೆ 82 ವರ್ಷದಿಂದ ಸೇವೆ ಮಾಡುತ್ತಿರುವ ದೇಶಪಾಂಡೆ ಅವರ ಸಾರಥ್ಯದ ಸಂದೇಶ ದಿನಪತ್ರಿಕೆಗಳಿಗೆ ಜಿಲ್ಲಾಡಳಿತ ಗೌರವ ಸಲ್ಲಿಸಲಿದ್ದು ಹಿರಿಯ ಪತ್ರಕರ್ತರಾದ ಎಲ್ ಎಸ್ ಶಾಸ್ತೀ,ಪುಂಡಲೀಕ ಪಾಟೀಲ,ಮತ್ತು ರಾಮಣ್ಣಾ ನಾಯಕ ಅವರನ್ನು ಜಿಲ್ಲಾಡಳಿತ ಸತ್ಕರಿಸಲಿದೆ

ಬೆಳಗಾವಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರರ ಸಮ್ಮುಖದಲ್ಲಿ ತೀರ್ಮಾಣ ಕೈಗೊಳ್ಳಲಾಗಿದೆ

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *