ಐದು ಜನ ಹೋರಾಟಗಾರರು ಐವರು ಹಿರಿಯ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಗೌರವ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದಾರೆ ಈ ವರ್ಷ ರಾಜ್ಯೋತ್ಸವದ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಐವರು ಕನ್ನಡ ಹೋರಾಟಗಾರರನ್ನು ಮತ್ತು ಐವರು ಹಿರಿಯ ಪತ್ರಕರ್ತರಿಗೆ ಕನ್ನಡದ ಸಮ್ಮಾನ ನೀಡಲಿದೆ

ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರರಾದ ರಾಮಚಂದ್ರ ಢವಳಿ,ಜೋರಾಪೂರೆ,ಶಿವಪ್ಪ ಕೋರವಾರ,ಕಸ್ತೂರಿ ಭಾವಿ ,ಮೈನೋದ್ದೀನ್ ಮಕಾನದಾರ ಅವರನ್ನು ಜಿಲ್ಲಾಡಳಿತದಿಂದ ರಾಜ್ಯೋತ್ಸವದ ದಿನ ಸತ್ಕರಿಸಲಾಗುತ್ತಿದೆ

ಕಳೆದ 71 ವರ್ಷದಿಂದ ಬೆಳಗಾವಿಯಲ್ಲಿ ಕನ್ನಡದ ಸೇವೆ ಮಾಡುತ್ತಿರುವ ಜನಜೀವಾಳ ಪತ್ರಿಕೆ 82 ವರ್ಷದಿಂದ ಸೇವೆ ಮಾಡುತ್ತಿರುವ ದೇಶಪಾಂಡೆ ಅವರ ಸಾರಥ್ಯದ ಸಂದೇಶ ದಿನಪತ್ರಿಕೆಗಳಿಗೆ ಜಿಲ್ಲಾಡಳಿತ ಗೌರವ ಸಲ್ಲಿಸಲಿದ್ದು ಹಿರಿಯ ಪತ್ರಕರ್ತರಾದ ಎಲ್ ಎಸ್ ಶಾಸ್ತೀ,ಪುಂಡಲೀಕ ಪಾಟೀಲ,ಮತ್ತು ರಾಮಣ್ಣಾ ನಾಯಕ ಅವರನ್ನು ಜಿಲ್ಲಾಡಳಿತ ಸತ್ಕರಿಸಲಿದೆ

ಬೆಳಗಾವಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರರ ಸಮ್ಮುಖದಲ್ಲಿ ತೀರ್ಮಾಣ ಕೈಗೊಳ್ಳಲಾಗಿದೆ

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *