Breaking News
Home / Breaking News / ಐದು ಜನ ಹೋರಾಟಗಾರರು ಐವರು ಹಿರಿಯ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಗೌರವ

ಐದು ಜನ ಹೋರಾಟಗಾರರು ಐವರು ಹಿರಿಯ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಗೌರವ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದಾರೆ ಈ ವರ್ಷ ರಾಜ್ಯೋತ್ಸವದ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಐವರು ಕನ್ನಡ ಹೋರಾಟಗಾರರನ್ನು ಮತ್ತು ಐವರು ಹಿರಿಯ ಪತ್ರಕರ್ತರಿಗೆ ಕನ್ನಡದ ಸಮ್ಮಾನ ನೀಡಲಿದೆ

ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರರಾದ ರಾಮಚಂದ್ರ ಢವಳಿ,ಜೋರಾಪೂರೆ,ಶಿವಪ್ಪ ಕೋರವಾರ,ಕಸ್ತೂರಿ ಭಾವಿ ,ಮೈನೋದ್ದೀನ್ ಮಕಾನದಾರ ಅವರನ್ನು ಜಿಲ್ಲಾಡಳಿತದಿಂದ ರಾಜ್ಯೋತ್ಸವದ ದಿನ ಸತ್ಕರಿಸಲಾಗುತ್ತಿದೆ

ಕಳೆದ 71 ವರ್ಷದಿಂದ ಬೆಳಗಾವಿಯಲ್ಲಿ ಕನ್ನಡದ ಸೇವೆ ಮಾಡುತ್ತಿರುವ ಜನಜೀವಾಳ ಪತ್ರಿಕೆ 82 ವರ್ಷದಿಂದ ಸೇವೆ ಮಾಡುತ್ತಿರುವ ದೇಶಪಾಂಡೆ ಅವರ ಸಾರಥ್ಯದ ಸಂದೇಶ ದಿನಪತ್ರಿಕೆಗಳಿಗೆ ಜಿಲ್ಲಾಡಳಿತ ಗೌರವ ಸಲ್ಲಿಸಲಿದ್ದು ಹಿರಿಯ ಪತ್ರಕರ್ತರಾದ ಎಲ್ ಎಸ್ ಶಾಸ್ತೀ,ಪುಂಡಲೀಕ ಪಾಟೀಲ,ಮತ್ತು ರಾಮಣ್ಣಾ ನಾಯಕ ಅವರನ್ನು ಜಿಲ್ಲಾಡಳಿತ ಸತ್ಕರಿಸಲಿದೆ

ಬೆಳಗಾವಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರರ ಸಮ್ಮುಖದಲ್ಲಿ ತೀರ್ಮಾಣ ಕೈಗೊಳ್ಳಲಾಗಿದೆ

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *