Breaking News

ಬರ್ತ್ ಡೇ ಪಾರ್ಟಿಗೆ ಕರೆದು ಯುವಕನ ಮರ್ಡರ್….

ಬರ್ತ್ ಡೇ ಪಾರ್ಟಿಗೆ ಕರೆದು ಯುವಕನ ಮರ್ಡರ್

ಬೆಳಗಾವಿ-ಜನ್ಮ ದಿನಕ್ಕೆ ಕರೆದು ಸ್ನೇಹಿತನನ್ನೆ ಭೀಕರವಾಗಿ ಕೊಲೆ ಮಾಡಿದ ಘಟನೆ ನುಗ್ಗಾನಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದ
ಬಸವರಾಜ ಗುರುಲಿಂಗಪ್ಪ ಮುದ್ದಣ್ಣವರ ( 23) ಕೊಲೆಯಾದ ದುರ್ದೈವಿಯಾಗಿದ್ದಾನೆ
.ಜನ್ಮ ದಿನಕ್ಕೆ ಕರೆದು ವೈಯಕ್ತಿಕ ಜಗಳಕ್ಕೆ ತಿರುಗಿ ನಾಲ್ಕೈದು ಜನ ಸೇರಿಕೊಂಡು ಬಸವರಾಜನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.ಎಂದು ತಿಳಿದು ಬಂದಿದೆ.

ಯುವಕ ಮನೆಯಲ್ಲಿ ಚಹಾ ಕುಡಿಯುತ್ತಿದ್ದಾಗ ಈತನ ಗೆಳೆಯರು ಫೋನ್ ಮಾಡಿ ಕರೆದಿದ್ದಾರೆ. ತಾಯಿ ಚಹಾ ಮಾಡುವಷ್ಟರಲ್ಲಿ ಮಗ ಚಹಾ ಕುಡಿಯದೇ ಗೆಳೆಯರ ಹತ್ತಿರ ಹೋಗಿದ್ದಾನೆ.ಯಾವುದೋ ಕಾರಣಕ್ಕೆ ಗೆಳೆಯರ ನಡುವೆ ಜಗಳ ಆಗಿದೆ. ಈ ಗಲಾಟೆ ಕೊನೆಗೆ ಯುವಕನ ಹತ್ಯೆಯಲ್ಲಿ ಅಂತ್ಯವಾಗಿದೆ.

ಹತ್ಯೆಯಾದ ಯುವಕ ಸಮಾಜ ಸೇವಕನಾಗಿದ್ದ,ಅನಾಥ ಮಕ್ಕಳಿಗೆ, ಅಸಹಾಯಕರಿಗೆ ಸಹಾಯ ಮಾಡುತ್ತಿದ್ದ ಎಂದು ತಾಯಿ ಕಣ್ಣೀರು ಹಾಕಿದ್ದಾಳೆ.ಈ ಕುರಿತು ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *