ಬೆಳಗಾವಿಯ ಪ್ರತಿಷ್ಠಿತ ಸಿಧ್ನಾಳ ಕುಟುಂಬದಲ್ಲಿ ಬ್ಲ್ಯಾಕ್ ಮ್ಯಾಜಿಕ್….!!

ಬೆಳಗಾವಿ- ಆಸ್ತಿಗಾಗಿ ಮಾಟ ಮಂತ್ರ ಮಾಡಲಾಗಿದೆ.ಕೇರಳದ ಬ್ಲ್ಯಾಕ್ ಮ್ಯಾಜಿಕ್ ಮಾಡಲಾಗಿದೆ.ಇತ್ತೀಚಿಗೆ ನಿಧನರಾದ ವಿಜಯಕಾಂತ ಡೈರಿ ಮಾಲೀಕ ಶಿವಕಾಂತ ಸಮಾಧಿ ಬಳಿಯೂ ವಾಮಾಚಾರ ಮಾಡಲಾಗಿದೆ ಆಸ್ತಿ ಕಬಳಿಸಲು ಜಾದೂ ನಡೆದಿದೆ.ಜಾದೂ ಮಾಡಿದವರು ಶಿವಕಾಂತ ಸಹೋದರ ಶಶಿಕಾಂತ ಮತ್ತು ಅವರ ಪುತ್ರ ದಿಗ್ವಿಜಯ ಮತ್ತು ಶಶಿಕಾಂತ ಪತ್ನಿ ಎಂದು ಆರೋಪಿಸಿ ಕಂಪ್ಲೇಂಟ್ ಮಾಡಿದವರು ಮತ್ತ್ಯಾರೂ ಅಲ್ಲ ಶಿವಕಾಂತ ಪತ್ನಿ, ಉದ್ಯಮಿ ವಿಜಯ ಸಂಕೇಶ್ವರ್ ಅವರ ಪುತ್ರಿ, ಎಸ್ ಬಿ ಸಿಧ್ನಾಳ ಅವರ ಸೊಸೆ.

ಮಾಟ..ಮಂತ್ರದ ಮೂಲಕ ಆಸ್ತಿ ಕಬಳಿಸುವ ತಂತ್ರ ನಡೆದಿದೆ. ಬ್ಲ್ಯಾಕ್ ಮ್ಯಾಜೀಕ್ ಮಾಡಲಾಗಿದೆ.ಎಂದು ಪೋಲೀಸರಿಗೆ ಕೊಟ್ಟ ದೂರಿನಲ್ಲಿ ಆರೋಪ ಮಾಡಲಾಗಿದೆ.ವಾಮಾಚಾರದ ಆರೋಪ, ಮಾಡಿ ಕ್ಯಾಂಪ್‌ ಠಾಣೆ ಮೆಟ್ಟಿಲೇರಿದ ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ

: ಆಸ್ತಿ ವಿಚಾರವಾಗಿ ತಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಮಾಡಲಾಗಿದೆ ಎಂದು ಆರೋಪಿಸಿ ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ ದೀಪಾ ಸಿದ್ನಾಳ ಅವರು ಸಿದ್ನಾಳ ಕುಟುಂಬದ ವಿರುದ್ಧ ಕ್ಯಾಂಪ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
ವಿಜಯಕಾಂತ ಡೇರಿ ಪಾಲುದಾರಿಕೆ ಹಾಗೂ ಅದರ ಆಸ್ತಿ ಹೊಡೆಯುವ ಉದ್ದೇಶದಿಂದ ಶಶಿಕಾಂತ ಸಿದ್ನಾಳ್, ಪತ್ನಿ ವಾಣಿ ಸಿದ್ನಾಳ್ ಹಾಗೂ ಪುತ್ರ ದಿಗ್ವಿಜಯ ಸಿದ್ನಾಳ್ ಅವರು ಸೇರಿಕೊಂಡು ತಮ್ಮ ವಿರುದ್ಧ ವಾಮಾಚಾರ ಮಾಡಿ ಆಸ್ತಿ ಹೊಡೆಯುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶಿವಕಾಂತ ಸಿದ್ನಾಳ್ ಅವರ ಒಡೆತನದ ವಿಜಯಕಾಂತ ಡೇರಿ 2006 ರಲ್ಲಿ ಸ್ಥಾಪನೆಯಾಗಿತ್ತು. ಶಿವಕಾಂತ ಅವರು ವಿಜಯ್ ಸಂಕೇಶ್ವರ್ ಅವರ ಪುತ್ರಿ ದೀಪಾ ಅವರನ್ನು ಮದುವೆಯಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಶಿವಕಾಂತ ಅವರು ಅನಾರೋಗ್ಯದಿಂದ ತೀರಿ ಹೋದ ನಂತರ ವಿಜಯಕಾಂತ ಡೇರಿ ಆಸ್ತಿ ಹೊಡೆಯುವ ಉದ್ದೇಶದಿಂದ ಶಿವಕಾಂತ ಸಹೋದರರ ಕುಟುಂಬ ವಾಮಾಚಾರದ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಶಿವಕಾಂತ್ ಸಿದ್ನಾಳ್ ಅವರು ತೀರಿಹೋದ ನಂತರ ಅವರ ಸಹೋದರ ಶಶಿಕಾಂತ ಸಿದ್ನಾಳ್, ಪತ್ನಿ ವಾಣಿ ಸಿದ್ನಾಳ್ ಹಾಗೂ ಪುತ್ರ ದಿಗ್ವಿಜಯ ಸಿದ್ನಾಳ್ ಅವರು ಸೇರಿಕೊಂಡು ಆಸ್ತಿ ಹೊಡೆಯುವ ಹುನ್ನಾರದಿಂದ ವಾಮಾಚಾರ ಮಾಡುತ್ತಿದ್ದಾರೆ. ಹಾಗೆಯೇ ಶಿವಕಾಂತ್ ಅವರ ಸಮಾಧಿ ಮೇಲೆಯೂ ವಾಮಾಚಾರ ಮಾಡಲಾಗಿದೆ ಎಂದು ವಿಜಯ್ ಸಂಕೇಶ್ವರ್ ಪುತ್ರಿ ದೀಪಾ ಸಿದ್ನಾಳ್ ಜೂನ್ 29 ರಂದು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ ವಿಜಯಕಾಂತ ಹಾಲಿನ ಡೇರಿಯಲ್ಲಿ ಸಧ್ಯ ಪ್ರತಿದಿನ 1.20 ಲಕ್ಷ ಹಾಲು ಉತ್ಪಾದನೆ ಮಾಡುತ್ತಿದ್ದು ಆದಿತ್ಯ ಮಿಲ್ಕ್ ಬ್ರ್ಯಾಂಡ್ ಅಡಿಯಲ್ಲಿ ಹಾಲಿನ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ವಿಜಯಕಾಂತ ಹಾಲಿನ ಡೇರಿಗೆ ಉದ್ಯಮಿ ವಿಜಯ್ ಸಂಕೇಶ್ವರ್ ಚೇರಮನ್‌ ಆಗಿದ್ದಾರೆ.

ಇಂತಹ ಆಧುನಿಕ ಡಿಜಿಟಲ್ ಯುಗದಲ್ಲೂ ಈ ತರಹದ ಆರೋಪ ಕೇಳಿ ಬಂದಿದ್ದು ಅಚ್ಚರಿಯ ಸಂಗತಿಯಾಗಿದೆ.ಮಾಟ ಮಂತ್ರದ ಮೂಲಕವೂ ಪರರ ಆಸ್ತಿ ಕಬಳಿಸಬಹುದೇ ? ಬ್ಲ್ಯಾಕ್ ಮ್ಯಾಜಿಕ್ ಮೂಲಕ ಅನ್ಯರನ್ನು ದುರ್ಬಲಗೊಳಿಸಬಹುದೇ ? ಎನ್ನುವ ಪ್ರಶ್ನೆ ಎದುರಾಗಿದ್ದು ಒಟ್ಟಾರೆ ಸಿಧ್ನಾಳ ಫ್ಯಾಮಿಲಿಯಲ್ಲಿ ಪ್ರಾಪರ್ಟಿ ಮ್ಯಾಜಿಕ್ ನಡೆಯುತ್ತಿದೆ ಎನ್ನುವದು ಖಾತ್ರಿಯಾಗಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *