ನಟ ದರ್ಶನ್ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಪ್ಟ್ ಆಗಬಹುದಾ..?

ಬೆಳಗಾವಿ- ಬೆಂಗಳೂರಿನ ಜೈಲಿನಲ್ಲಿ ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಬಾಸ್ ತರಹ ಪೋಜ್ ಕೊಟ್ಟ ಕೊಲೆ ಆರೋಪಿ ದರ್ಶನ್, ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಪ್ಟ್ ಆಗುವ ಸಾಧ್ಯತೆಗಳಿವೆ.

ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ತಾಕೀತು ಮಾಡಿದ್ದಾರೆ.

ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡದ ಹಿನ್ನಲೆಯಲ್ಲಿಆರೋಪಿ ದರ್ಶನ್ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಪ್ಟ್ ಆಗುವ ಸಾದ್ಯತೆಗಳು ಹೆಚ್ಚು.

ಜೈಲು ಡಿಜಿ ಮಾಲಿನಿ ಕೃಷ್ಣಮೂರ್ತಿ ರಾಜ್ಯದ ಪ್ರಮುಖ ಬಂಧಿಖಾನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ..ಹಿಂಡಲಗಾ ಜೈಲಿನ ಭದ್ರತಾ ವ್ಯವಸ್ಥೆ ಕುರಿತು ಅವರು ಮಾಹಿತಿ ಪಡೆದಿದ್ದಾರೆ ಎನ್ನುವ ಮಾಹಿತಿ ಪಡೆದಿದ್ದಾರೆ

Check Also

ಪೋಲಿಸ್ ಠಾಣೆ ಮುಂದೆಯೇ ಕುಡುಕನ ಹೈಡ್ರಾಮಾ….!!

ಬೆಳಗಾವಿ-ಪೋಲಿಸ್ ಠಾಣೆ ಮುಂದೆಯೇ ಕುಡುಕನ ಹೈಡ್ರಾಮಾ ನಡೆಸಿದ ಘಟನೆ,ಬೆಳಗಾವಿ ನಗರದ ಟಿಳಕವಾಡಿ ಪೋಲಿಸ್ ಠಾಣೆ ಮುಂದೆ ನಡೆದಿದೆ. ಕುಡುಕ ಅವಾಂತರ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.