ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ.
ಬೆಳಗಾವಿಯರಾಮನಗರದಲ್ಲಿ ಈ ಘಟನೆ ನಡೆದಿದೆ.ಗಣೇಶ ಹಬ್ಬದ ನಿಮಿತ್ಯ ಪಟಾಕಿ ಹಾರಿಸುವ ವೇಳೆ ಈ ಘಟನೆ ನಡೆದಿದೆ.ಹನುಮಂತ ಗಾಡಿವಡ್ಡರ (12) ಗಾಯಗೊಂಡ ಯುವಕನಾಗಿದ್ದಾನೆ.
*ಪಟಾಕಿಗೆ ಬೆಂಕಿ ಹಚ್ಚಿ ಒಗೆದಿದ್ದ ವ್ಯಕ್ತಿ ಬೆಂಕಿ ಹತ್ತಿಲ್ಲಾ ಎಂದು ಜೇಬಿಗೆ ಹಾಕಿಕೊಂಡಿದ್ದ,ಜೇಬಿಗೆ ಹಾಕಿಕ್ಕೊಳ್ಳುತ್ತಿದ್ದಂತೆ ಜೇಬಿನಲ್ಲೆ ಪಟಾಕಿ ಸಿಡಿದು ಗಂಭೀರ ಗಾಯಗೊಂಡಿದ್ದಾನೆ.ಜೇಬಿನಲ್ಲಿ ಪಟಾಕಿ ಸಿಡಿದು ಮರ್ಮಾಂಗಕ್ಕೂ ಸಂಪೂರ್ಣ ಗಾಯವಾಗಿದೆ.
ಬೆಳಗಾವಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಯುವಕನನ್ನುಗಂಭೀರ ಗಾಯ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮಾಳಮಾರುತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ