Breaking News

ರಾಜ್ಯೋತ್ಸವದ ಪ್ರಶಸ್ತಿ ವಿಚಾರದಲ್ಲಿ ಮಾದ್ಯಮ ಲೋಕದ ಸರ್ವರಿಗೂ ಸಮ್ಮಾನ….!!!!

ಪತ್ರಿಕಾ ವಿತರಕ ಸದೆಪ್ಪ ಫಕೀರಪ್ಪ ಗರಗದ

ಬೆಳಗಾವಿ – ಬೆಳಗಾವಿ ಜಿಲ್ಲಾಡಳಿತ ಈ ಬಾರಿ ಬೆಳಗಾವಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಪತ್ರಿಕಾರಂಗದ ಎಲ್ಲ ವಿಭಾಗಗಳಿಗೆ ಆದ್ಯತೆ ನೀಡಿ ಎಲ್ಲರಿಗೂ ಸಮ್ಮಾನಿಸಿದೆ.

ಪತ್ರಿಕಾ ವಿಭಾಗ, ಇಲೆಕ್ಟ್ರಾನಿಕ್ ಮಾದ್ಯಮ ವಿಭಾಗ, ಸ್ಥಳೀಯ ಸಂಪಾದಕರ ವಿಭಾಗ, ತಾಲ್ಲೂಕು ಮಟ್ಟದ ವರದಿಗಾರರ ವಿಭಾಗ,ಛಾಯಾಗ್ರಾಹಕ ವಿಭಾಗ, ಕ್ಯಾಮರಾಮನ್ ವಿಭಾಗ,ಜೊತೆಗೆ ಪತ್ರಿಕಾ ವಿತರಕರ ವಿಭಾಗದ ಸಾಧಕರನ್ನು ಗುರುತಿಸುವ ಮೂಲಕ ಸಂಪೂರ್ಣ ಮಾದ್ಯಮ ಕ್ಷೇತ್ರಕ್ಕೆ ಗೌರವ ಸೂಚಿಸಿದೆ.

ಈ ಬಾರಿ ಪತ್ರಿಕಾ ಛಾಯಾಗ್ರಾಹಕ ಏಕನಾಥ ಅಗಸಿಮನಿ, ಕ್ಯಾಮರಾಮನ್ ರೋಹೀತ್ ಶಿಂಧೆ, ಸುಬಾನಿ ಮುಲ್ಲಾ ಪತ್ರಿಕಾ ವಿತರಕ ಬೈಲಹೊಂಗಲ ನೇಗಿನಹಾಳ ಗ್ರಾಮದ ಸದೆಪ್ಪ ಫಕೀರಪ್ಪ ಗರಗದ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಸಂತಸದ ಸಂಗತಿಯಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರ ದೂರದೃಷ್ಟಿ, ಪ್ರಶಸ್ತಿ ಆಯ್ಕೆ ಸಮೀತಿಯ ಅಧ್ಯಕ್ಷ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ವಿಶೇಷ ಕಾಳಜಿ, ಆಯ್ಕೆ ಸಮೀತಿಯ ಸಾಮಾಜಿಕ ನ್ಯಾಯದ ಧೋರಣೆಯಿಂದಾಗಿ ಮಾದ್ಯಮ ಲೋಕದ ಸರ್ವರಿಗೂ ಸಮ್ಮಾನ ಸಿಕ್ಕಿದ್ದು ಹರ್ಷದ ಸಂಗತಿ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *