ಕುರಿ ಹಿಂಡಿನ ಚಲನವಲನ ಮನೆಯಲ್ಲೇ ಇದ್ದ ವಿಲನ್….!!!

ಬೆಳಗಾವಿ- ಒಬ್ಬ ವ್ಯಕ್ತಿಯ ಕೊಲೆ ನಡೆದಾಗ ಆರೋಪಿಗಳನ್ನು ಪತ್ತೆ ಮಾಡುವದು ಸುಲಭವಲ್ಲ, ಪೋಲೀಸರು ಈ ವಿಚಾರದಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ಮಾಡ್ತಾರೆ,ಆದ್ರೂ ಆರೋಪಿಗಳು ಪತ್ತೆಯಾಗುವದಿಲ್ಲ.ಅಪರಾಧಿಗಳು ಅಪರಾಧವನ್ನು ಮುಚ್ಚಿಡಲು ಸಾಧ್ಯವೇ ಇಲ್ಲ ಯಾಕಂದ್ರೆ ಇವತ್ತಿನ ಅಧುನಿಕ ಕಾಲದಲ್ಲಿ ಪೋಲೀಸರಿಗೆ ಸಣ್ಣ ಸುಳಿವು ಸಿಕ್ರೆ ಸಾಕು ಅವರು ಇಡೀ ಪ್ರಕರಣವನ್ನು ಜಾಲಾಡಿಸಿ ಬಿಡ್ತಾರೆ.

ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೋಲೀಸ್ ಠಾಣೆಯ ವ್ಯಾಪ್ತಿಯ ಹಟ್ಟಿಆಲೂರ ಗ್ರಾಮದಲ್ಲಿ ಕುರಿ ಹಿಂಡು ಕಾಯುತ್ತಿದ್ದ ವ್ಯಕ್ತಿಯ ಕೊಲೆ ನಡೆದು ಒಂದು ತಿಂಗಳು ಗತಿಸಿದರೂ ಪೋಲೀಸರಿಗೆ ಆರೋಪಿಗಳನ್ನು ಪತ್ತೆ ನಾಡಲು ಸಾಧ್ಯವಾಗಿರಲಿಲ್ಲ ಕೊಲೆಯಾದ ವ್ಯಕ್ತಿಯ ನೆಗೆಟಿವ್ ವಿಚಾರಗಳನ್ನು ಜಾಲಾಡಿಸಿದ್ರೂ ಆರೋಪಿಗಳು ಯಾರು ಅಂತಾ ಗೊತ್ತಾಗಿರಲಿಲ್ಲ. ಎಲ್ಲ ಆಯಾಮಗಳಿಂದ ವಿಚಾರಣೆ ಮಾಡಿ ಸುಸ್ತಾದ ಪೋಲೀಸರು ಕೊನೆಗೆ ಕುರಿಹಿಂಡಿನ ಚಲನವಲನಗಳ ಜಾಡು ಹಿಡಿದು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕುರಿಹಿಂಡು ಕಾಯುತ್ತಿದ್ದ ಹಟ್ಟಿಆಲೂರಿನ ರಾಯಪ್ಪ ಕಮತಿ (28) ಎಂಬಾತನ ಕೊಲೆ ಮಾಡಿ ಹೊಲದಲ್ಲಿ ಶವ ಎಸೆಯಲಾಗಿತ್ತು ಒಂದು ತಿಂಗಳ ಕಾಲ ವಿಚಾರಣೆ ನಡೆಸಿದ ಪೋಲೀಸರಿಗೆ ಸುಳಿವು ಸಿಕ್ಕಿರಲಿಲ್ಲ ನಂತರ ಯಮಕನಮರಡಿ ಸಿಪಿಐ ಜಾವೇದ್ ಮುಶಾಪೂರೆ ಕುರಿ ಹಿಂಡು ಕಾಯುತ್ತಿದ್ದ ರಾಯಪ್ಪನ ಕೊಲೆಯಾದ ನಂತರ ಕುರಿ ಹಿಂಡು ಮನೆಗೆ ತಲುಪಿದ್ದು ಹೇಗೆ ? ಎನ್ನುವದರ ಬಗ್ಗೆ ವಿಚಾರಣೆ ಮಾಡ್ತಾರೆ, ಕುರಿಹಿಂಡನ್ನು ಮತ್ತು ಜೊತೆಗಿದ್ದ ಎರಡು ನಾಯಿಗಳನ್ನು ಘಟನಾ ಸ್ಥಳಕ್ಕೆ ಕರೆಯಿಸುತ್ತಾರೆ. ಕುರಿ ಕಾಯುತ್ತಿದ್ದ ರಾಯಪ್ಪನ ಮೇಲೆ ಹಲ್ಲೆ ಮಾಡಿದಾಗ ಕುರಿಹಿಂಡಿನ ಜೊತೆಗಿದ್ದ ನಾಯಿಗಳು ಬೊಗಳಲಿಲ್ಲ ನಂತರ ಕುರಿಹಿಂಡನ್ನು ಮರಳಿ ಮನೆಗೆ ಕಳುಹಿಸುವಾಗ ಕುರಿಹಿಂಡು ತಾವಾಗಿ ಮನೆಗೆ ಹೋಗಲಿಲ್ಲ ಕಿನಾಲ್ ಪಕ್ಕದಲ್ಲಿ ಬಂದು ಹುಲ್ಲು ಮೇಯಲು ಶುರುಮಾಡಿದವು, ಹಾಗಾದ್ರೆ ರಾಯಪ್ಪನ ಕೊಲೆಯಾದ ಬಳಿಕ ಕುರಿಹಿಂಡು ಮನೆಗೆ ತಲುಪಿದ್ದು ಹೇಗೆ ? ಎನ್ನುವ ವಿಚಾರ ಬಂದಾಗ ಪೋಲೀಸರು ಕೊಲೆಯಾದ ವ್ಯಕ್ತಿಯ ಮನೆಯವರ ಮೇಲೆ ಅನುಮಾನ ಪಡುತ್ತಾರೆ. ರಾಯಪ್ಪನ ಕೊಲೆ ಮಾಡುವ ಮುನ್ನ ಆತನ ಕಣ್ಣಿಗೆ ಕಾರದಪುಡಿ ಎರೆಚಲಾಗಿತ್ತು ಪೋಲೀಸರು ಆ ಕಾರದಪುಡಿಯನ್ನು ಮತ್ತು ರಾಯಪ್ಪನ ಮನೆಯಲ್ಲಿದ್ದ ಕಾರದಪುಡಿಯನ್ನು ಹೋಲಿಕೆ ಮಾಡಿ ನೋಡ್ತಾರೆ ಎರಡೂ ಕಾರದಪುಡಿಯ ಹೋಲಿಕೆಯಾದ ಬಳಿಕ ಪೋಲೀಸರು ಮನೆಯವರನ್ನು ವಿಚಾರಣೆ ಮಾಡ್ತಾರೆ ಆವಾಗ್ಲೆ ಪೋಲೀಸರಿಗೆ ಗೊತ್ತಾಗುತ್ತದೆ ವಿಲನ್ ಇರೋದು ಕೊಲೆಯಾದ ವ್ಯಕ್ತಿಯ ಮನೆಯಲ್ಲೇ ಅನ್ನೋದು.

ಕೊಲೆಯಾದ ರಾಯಪ್ಪ ಕಮತಿಯ ತಮ್ಮ ಬಸವರಾಜ್ ಕಮತಿ ಎಂಬಾತ ಅಣ್ಣ ರಾಯಪ್ಪನ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ ಅಣ್ಣನ ಕೊಲೆ ಮಾಡಿದ ತಮ್ಮ ಕುರಿಹಿಂಡನ್ನು ಕಿನಾಲ್ ದಾಟಿಸಿ ಮನೆಗೆ ತಲುಪಿಸಿದ್ದ ಅಣ್ಣ ತನಗೆ ಕಲಿಯಲು ಬಿಡುತ್ತಿಲ್ಲ ಅಂತಾ ತಮ್ಮ ಬಸವರಾಜ್ ಅಣ್ಣ ರಾಯಪ್ಪನ ಕೊಲೆ ಮಾಡಿದ್ದ ಕುರಿಹಿಂಡಿನ ಚಲನವಲನ ಅಸಲಿ ವಿಲನ್ ಜೈಲು ಸೇರುವಂತೆ ಮಾಡಿದೆ.ಈ ಕೇಸ್ ನಲ್ಲಿ ಯಮಕನಮರಡಿ ಪೋಲೀಸರು ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ.

Check Also

ಬೆಳಗಾವಿಯಲ್ಲಿ ಯುವಕನಿಗೆ ಚಾಕು ಇರಿತ.

ಬೆಳಗಾವಿ -ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತವಾದ ಘಟನೆ ಬೆಳಗಾವಿಯ ಕಣಬರ್ಗಿ ಪ್ರದೇಶದಲ್ಲಿ ನಡೆದಿದೆ. ನಾಳೆ ತಂಗಿ ಮದುವೆ …

Leave a Reply

Your email address will not be published. Required fields are marked *