ಬೆಳಗಾವಿ
ಆಸ್ತಿ ವಿಚಾರಕ್ಕೆ ಸಹೋದರನ ಪತ್ನಿಯನ್ನು ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿರವ ಘಟನೆ ಬೆಳಗಾವಿ ಟಿಳಕವಾಡಿಯ ಮಂಗಳವಾರಪೇಠ್ ನಲ್ಲಿ ಬುಧವಾರ ನಡೆದಿದೆ.
ತೀವ್ರವಾಗಿ ಗಾಯಗೊಂಡಿದ್ದ ಗೀತಾ ಗವಳಿ (45) ಬಿಮ್ಸ್ ಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಗೀತಾ ಪತಿ ರಂಜಿತ್ ಗವಳಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ. ಪತಿಗೆ ಸೇರಿದ 40*12 ಜಾಗಕ್ಕಾಗಿ ಜಗಳ ಮಾಡಿ ಗಣೇಶ ಚಾಕು ಇರಿದು ಪರಾರಿಯಾಗಿದ್ದಾನೆ.
ಗೀತಾ ಹಾಗೂ ಆರೋಪಿ ಗಣೇಶ ಗವಳಿ ನಡುವೆ ವಿವಾದ.ಇಂದು ಬೆಳಗ್ಗೆ ಮಾತಿನ ಚಕಮಕಿ ವೇಳೆಯಲ್ಲಿಭೀಕರವಾಗಿ ಹತ್ಯೆ ಮಾಡಲಾಗಿದೆ.
ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರೋ ಗಣೇಶ. ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಗಣೇಶ ಗವಳಿ. ತಮ್ಮನ ಪತ್ನಿಯನ್ನು ಕೊಲೆ ಮಾಡಿ ಸದ್ಯ ಎಸ್ಕೆಪ್.ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.