ಕೆಂಡದಲ್ಲಿ ಬಿದ್ದು ಎದ್ದರು,ಕೆಂಡ ಜನರ ಮೇಲೆ ಎರಚಿದರು..!!

ಬೆಳಗಾವಿ-ಮೊಹರಂ ಆಚರಣೆ ವೇಳೆ ಕೆಂಡ ಹಾಯುವ ವೇಳೆ ಯಡವಟ್ಟಾದ ಘಟನೆ,ಕ-ಶಿವಾಪುರ ಗ್ರಾಮದಲ್ಲಿ ನಡೆದಿದೆ.

ಕೆಂಡ ಹಾಯಲು ಹೋಗಿ ಬೆಂಕಿಗೆ ಬಿದ್ದ ಯುವಕ ಮತ್ತೆ ಎದ್ದು ಮುಂದಕ್ಕೆ ಸಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕೋ-ಶಿವಾಪುರ ಗ್ರಾಮದಲ್ಲಿ ಮೋಹರಂ ಕಿಚ್ಚ ಹಾಯುವಾಗ ಈ ಯಡವಟ್ಟು ನಡೆದಿದೆ.

ಮತ್ತೊಂದೆಡೆ ತಲ್ಲೂರ ಗ್ರಾಮದಲ್ಲಿ ಕೆಂಡ ಹಾಯುವ ವೇಳೆ ಬೆಂಕಿ ಜೊತೆಗೆ ಯುವಕನೊಬ್ಬ ಹುಚ್ಚಾಟ ನಡೆಸಿದ್ದಾನೆ.ಕೆಂಡ ಹಾಯುವ ವೇಳೆ ಕೈಯಿಂದ ಕೆಂಡವನ್ನು ಜನರ ಮೇಲೆ ಎರಚಿದ ಕಿಡಿಗೇಡಿ ಗೊಂದಲ ಮೂಡಿಸಿದ ಘಟನೆಯೂ ನಡೆದಿದೆ.
ಕೆಂಡ ಹಾಯುವ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಬಾಗಿ ಕೈಯಿಂದ ಕೆಂಡ ಎರಚಿ ಉದ್ಧಟತನ ಪ್ರದರ್ಶಿಸಿದ್ದಾನೆ.ಕೆಂಡದ ಸುತ್ತಮುತ್ತ ನಿಂತಿದ್ದ ಜನರ ಮೇಲೆ ಕೆಂಡ ಎರಚಿದ ಉದ್ಧಟತನ ಪ್ರದರ್ಶಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *