Breaking News
Home / Breaking News / ಹಿಂದೂ ಸಂಘಟನೆಗಳ ಮೆರವಣಿಗೆ,ಪೋಲೀಸ್ ಅಧಿಕಾರಿಗಳ ನಡುವೆ ವಾಗ್ವಾದ

ಹಿಂದೂ ಸಂಘಟನೆಗಳ ಮೆರವಣಿಗೆ,ಪೋಲೀಸ್ ಅಧಿಕಾರಿಗಳ ನಡುವೆ ವಾಗ್ವಾದ

ಬೆಳಗಾವಿ-ಬೆಳಗಾವಿ ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ಖಂಡಿಸಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಬೃಹತ ಪ್ರತಿಭಟನೆ ನಡೆಯಿತು

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದಿಂದ ಪ್ರತಿಭಟನೆ ಆಯೋಜಿಸಲಾಗಿತ್ತು ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಆರಂಭವಾದ ಮೆರವಣಿಗೆ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿತು

ಪೋಲೀಸರು ಸೂಚಿಸಿದ ಮಾರ್ಗದಿಂದ ತೆರಳಲು ಪ್ರತಿಭಟನಾ ಕಾರರು ನಿರಾಕರಿಸಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು
ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ವಾಗ್ವಾದ ನಡೆಯಿತು ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ವಾಗ್ವಾದ ನಡೆಯಿತು

ಶಾಸಕ ಸಂಜಯ ಪಾಟೀಲ ಮತ್ತು ಮಾಜಿ ಶಾಸಕ ಅಭಯ ಪಾಟೀಲರಿಂದ ವಾಗ್ವಾದ ನಡೆದು ಪೋಲೀಸರು ಸೂಚಿಸಿದ ಮಾರ್ಗದಲ್ಲಿ ಸಾಗಬೇಕು ಅನ್ನೋದು ಕಾನೂನು ಇಲ್ಲ ಮಾರುತಿ ಗಲ್ಲಿ ಮಾರ್ಗವಾಗಿ ಹೋಗುವುದಾಗಿ ಪಟ್ಟು ಹಿಡಿದರು ಕೊನೆಗೆ ಪ್ರತಿಭಟನಾ ಕಾರರು ಮಾರುತಿ ಗಲ್ಲಿ ಮಾರ್ಗವಾಗಿ ತೆರಳಿದರು ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು

ಪ್ರತಿಭಟನಾ ಮಾರ್ಗದುದ್ದಕ್ಕೂ ಬೀಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು ಮೆರವಣಿಗೆ ಮಾರ್ಗದಲ್ಲಿ ಅಂಗಡಿಕಾರರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ರು

ಡಿಸಿಪಿಗಳಾದ ಸೀಮಾ ಲಾಟಕರ, ಅಮರನಾಥ ರೆಡ್ಡಿ ನೇತೃತ್ವದಲ್ಲಿ ಭದ್ರತೆ‌ ಒದಗಿಸಲಾಗಿದ್ದು ಹಿಂದೂ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ ಧರ್ಮವೀರ ಸಂಬಾಜಿ ವೃತ್ತದಿಂದ ಆರಂಭವಾಗಿ ಕಿರ್ಲೋಸ್ಕರ್ ರಸ್ತೆ ಮಾರುತಿ ಗಲ್ಲಿ, ಶನಿವಾರ ಖೂಟ ಚನ್ನಮ್ಮ ವೃತ್ತದ ಮೂಲಕ ಸಂಚರಿಸಿ ಜಿಲ್ಲಾಧಿಕಾರಿ ಗಳ ಕಚೇರಿ ತಲುಪಲಿದೆ

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *