ಬೆಳಗಾವಿ ಬಂದ್ ಇಲ್ಲ…ಬಸ್ ಅಟೋ ಓಡಾಟ ನಿಂತಿಲ್ಲ..ಜನರಲ್ಲಿ ಆಕ್ರೋಶ ಇಲ್ಲವೇ ಇಲ್ಲ..

 
ಆಂಕರ್– ಕೇಂದ್ರ ಸರ್ಕಾರ 500 ಹಾಗೂ 1000 ರೂಪಾಯಿ ಬ್ಯಾನ ಮಾಡಿದ ಹಿನ್ನಲೆಯಲ್ಲಿ ಪ್ರತಿಪಕ್ಷಗಳಿಂದ ಇಂದು ಆಕ್ರೋಶ ದಿವಸ ಆಚರಣೆ ಹಿನ್ನಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಯಾವುದೇ ಬಂದ ಬಿಸಿ ತಟ್ಟಿಲ್ಲ.

ಬೆಳಗಾವಿಯಲ್ಲಿ ಎಂದಿನಂತೆ ಕೆಎಸ್ಆರ್ಟಿಸಿ ಹಾಗೂ ನಗರ ಬಸ್ ಸಂಚಾರ ಎಂದಿನಂತೆ ಸಂಚಾರ ಆರಂಭಿಸುತ್ತವೆ. ಅಲ್ಲದೇ ಅಂಗಡಿ ಮುಗ್ಗಟ್ಟುಗಳ ವ್ಯಾಪಾರ ವಹಿವಾಟು ಎಂದಿನಂತೆ ಸರಾಗವಾಗಿ ನಡೆದಿದೆ ಬಂದ್ ಬಿಸಿ ತಟ್ಟಿಲ್ಲ. ಜನ ಜೀವನ ಯಥಾ ಸ್ಥಿತಿಇದೆ. ಜಿಲ್ಲೆಯ ಶಾಲಾ ಕಾಲೇಜ್ ಗಳಿಗೆ ರಜೆ ಇಲ್ಲ ಎಂದಿನಂತೆ ಶಾಲಾ ಕಾಲೇಜ್ ಗಳು ಆರಂಭ ಇವೆ

. ಇನ್ನು ಆಟೋ ಟೆಂಪೊ ಸೇರಿದಂತೆ ಖಾಸಗಿ ಬಸ್ ಎಂದಿನಂತೆ ಸಂಚಾರ ಆರಂಭಿಸಿವೆ. ಇನ್ನು ಬೆರೆ ಬೆ ಊರುಗಳಿಂದ ಬಸ್ ಗಳು ಆಗಮಿಸುತ್ತಿವೆ. ಮಹಾರಾಷ್ಟ್ರ ಗೋವಾ ಸೇರಿದಂತೆ ವಿವಿದೆಡೆ ಕೆಎಸ್ಆರ್ ಟಿಸಿ ಸಂಚಾರ ಸರಾಗವಾಗಿ ಆರಂಬಿಸಿವೆ. ಯಾವುದೇ ಅಕ್ರೊಶ ದಿವಸ ಆಚರಣೆಯ ಲಕ್ಷಣಗಳು ಕಾಣುತ್ತಿಲ್ಲ.

ಆಕ್ರೋಶ ದಿನ ಆಚರಿಸುವಂತೆ ಪ್ರತಿಪಕ್ಷಗಳು ಕರೆ ನೀಡವೆ ಆದರೆ ಬೆಳಗಾವಿ ಜನರಲ್ಲಿ ಆಕ್ರೋಶ ಕಾಣುತ್ತಿಲ್ಲ ಎಲ್ಲರು ನಗು ನಗುತ್ತಲೇ ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದ್ದಾರೆ ಈಗ ಸದ್ಯಕ್ಕೆ ಬೆಳಗಾವಿ ಬಂದ್ ಠುಸ್ಸಾಗಿದೆ

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *