ಬೆಳಗಾವಿ ಪಾಲಿಕೆ ವಾರ್ಡ್ ವಿಂಗಡನೆ, ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಪಿಟೀಶನ್ ದಾಖಲು

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡುಗಳ ಪುನರ್ ವಿಂಗಡನೆ ಮತ್ತು ಮೀಸಲಾತಿಯನ್ನು ಪ್ರಶ್ನಿಸಿ ತಡೆಯಾಜ್ಞೆ ಕೋರಿ ಮಾಜಿ ನಗರಸೇವಕ ಭೈರಗೌಡ ಪಾಟೀಲ,ಧನರಾಜ ಗವಳಿ ಸೇರಿದಂತೆ ಹತ್ತು ಜನ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಪಿಟೇಶನ್ ದಾಖಲು ಮಾಡಿದ್ದಾರೆ

ವಾರ್ಡುಗಳ ಪುನರ್ ವಿಂಗಡನೆ ಅವೈಜ್ಞಾನಿಕವಾಗಿ ಮಾಡಲಾಗಿದೆ ವಾರ್ಡುಗಳ ಮೀಸಲಾತಿಯೂ ಸರಿಯಾಗಿಲ್ಲ ವಾರ್ಡುಗಳ ಪುನರ್ ವಿಂಗಡನೆ ಮತ್ತು ಮೀಸಲಾತಿಗೆ ತಡೆಯಾಜ್ಞೆ ನೀಡುವಂತೆ ರಿಟ್ ಪಿಟೇಶನ್ ನಲ್ಲಿ ಕೋರಲಾಗಿದೆ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 58 ವಾರ್ಡುಗಳಿದ್ದು ವರ್ಷದ ಹಿಂದೆಯೇ ಪುನರ್ ವಿಂಗಡನೆ ಮಾಡಲಾಗಿತ್ತು ವಿಂಗಡನೆಯಾದ ವಾರ್ಡುಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಅಕ್ಷೇಪಣೆಗಳನ್ನು ಸ್ವೀಕರಿಸಿ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿತ್ತು

ಮಾಜಿ ನಗರ ಸೇವಕರಾದ ಭೈರಗೌಡ ಪಾಟೀಲ ಮತ್ತು ಧನರಾಜ ಗವಳಿ ಸೇರಿದಂತೆ ಬೆಳಗಾವಿ ನಗರದ ಒಟ್ಟು ಹತ್ತು ಜನ ಕೋರ್ಟ್ ಮೆಟ್ಟಲೇರಿದ್ದಾರೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *