Breaking News

ಬೆಳಗಾವಿ ಪಾಲಿಕೆ ವಾರ್ಡ್ ವಿಂಗಡನೆ, ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಪಿಟೀಶನ್ ದಾಖಲು

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡುಗಳ ಪುನರ್ ವಿಂಗಡನೆ ಮತ್ತು ಮೀಸಲಾತಿಯನ್ನು ಪ್ರಶ್ನಿಸಿ ತಡೆಯಾಜ್ಞೆ ಕೋರಿ ಮಾಜಿ ನಗರಸೇವಕ ಭೈರಗೌಡ ಪಾಟೀಲ,ಧನರಾಜ ಗವಳಿ ಸೇರಿದಂತೆ ಹತ್ತು ಜನ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಪಿಟೇಶನ್ ದಾಖಲು ಮಾಡಿದ್ದಾರೆ

ವಾರ್ಡುಗಳ ಪುನರ್ ವಿಂಗಡನೆ ಅವೈಜ್ಞಾನಿಕವಾಗಿ ಮಾಡಲಾಗಿದೆ ವಾರ್ಡುಗಳ ಮೀಸಲಾತಿಯೂ ಸರಿಯಾಗಿಲ್ಲ ವಾರ್ಡುಗಳ ಪುನರ್ ವಿಂಗಡನೆ ಮತ್ತು ಮೀಸಲಾತಿಗೆ ತಡೆಯಾಜ್ಞೆ ನೀಡುವಂತೆ ರಿಟ್ ಪಿಟೇಶನ್ ನಲ್ಲಿ ಕೋರಲಾಗಿದೆ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 58 ವಾರ್ಡುಗಳಿದ್ದು ವರ್ಷದ ಹಿಂದೆಯೇ ಪುನರ್ ವಿಂಗಡನೆ ಮಾಡಲಾಗಿತ್ತು ವಿಂಗಡನೆಯಾದ ವಾರ್ಡುಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ಸಾರ್ವಜನಿಕರಿಂದ ಅಕ್ಷೇಪಣೆಗಳನ್ನು ಸ್ವೀಕರಿಸಿ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿತ್ತು

ಮಾಜಿ ನಗರ ಸೇವಕರಾದ ಭೈರಗೌಡ ಪಾಟೀಲ ಮತ್ತು ಧನರಾಜ ಗವಳಿ ಸೇರಿದಂತೆ ಬೆಳಗಾವಿ ನಗರದ ಒಟ್ಟು ಹತ್ತು ಜನ ಕೋರ್ಟ್ ಮೆಟ್ಟಲೇರಿದ್ದಾರೆ

Check Also

ಖಡಕ್ ಪೋಲೀಸ್ ಅಧಿಕಾರಿ ಭರಮಣಿಗೆ ಅವಮಾನ, ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಳಗಾವಿ-ಸಿಎಂ ಖುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿದ್ರಾಮಯ್ಯ ಸಹನೆ ಕಳೆದುಕೊಂಡಿದ್ದು ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸತ್ತಿದ್ದಾರೆ,ಮುಖ್ಯಮಂತ್ರಿಗಳ ಅಸಭ್ಯ ವರ್ತನೆಯಿಂದ …

Leave a Reply

Your email address will not be published. Required fields are marked *