Breaking News

ಪೋಲೀಸರೇ, ಬೋರ್ಡ್ ನೋಡಿ,ಬಿಟ್ಟು ಬಿಡಿ…..!!!

ಬೆಳಗಾವಿ- ಬೆಳಗಾವಿ ಪೋಲೀಸರ ಲಾಠಿ ಏಟಿಗೆ ಇನ್ನೂ ಬೆಳಗಾವಿಯ ಜನ ಹೆದರಿಲ್ಲ ,ಆದ್ರೆ ಖಾನಾಪೂರ ಮೂಲದ ವ್ಯೆಕ್ತಿಯೊಬ್ಬನಿಗೆ ನಾಯಿ ಕಚ್ಚಿದ್ದು ಆತ ಮಾತ್ರ ಬೆಳಗಾವಿ ಪೋಲೀಸರ ಲಾಠಿಗೆ ಬೆದರಿದ್ದು ನಿಜ ಅದು ಹೇಗೆ ? ಅಂತೀರಾ ಹಾಗಾದರೆ ಈ ಸ್ಟೋರಿ ಸಂಪೂರ್ಣವಾಗಿ ಓದಿ…..

ಖಾನಾಪೂರದ ವ್ಯೆಕ್ತಿಯೊಬ್ಬನಿಗೆ ನಾಯಿ ಕಚ್ಚಿದೆ ಆತ ಖಾನಾಪೂರದಿಂದ ಬೆಳಗಾವಿಗೆ ಬೈಕ್ ಮೇಲೆ ಬರುವಾಗ ,ನನಗೆ ನಾಯಿ ಕಚ್ವಿದೆ ,ನಾನು ಆಸ್ಪತ್ರೆಗೆ ಹೊರಟಿದ್ದೇನೆ ದಯವಿಟ್ಟು ಬಿಡಿ’ ಎಂಬ ಬೋರ್ಡ್ ಬರೆಯಿಸಿ ಈ ಬೋರ್ಡನ್ನು ಬೈಕ್ ಎದುರು ಅಂಟಿಸಿ,ಇನ್ನೊಂದು ಬೋರ್ಡನ್ನು ಹಿಂಬದಿ ಸವಾರನ ಕೈಗೆ ಕೊಟದಟು ಈ ಸವಾರ ಬೆಳಗಾವಿ ತಲುಪಿದ್ದಾನೆ.

ಈ ಸವಾರನ ಹೊಸ ಪ್ಲಾನ್ ನೋಡಿ ಬೆಳಗಾವಿ ಪೋಲೀಸರಿಗೆ ಅಚ್ಚರಿ..

ಕೊರೊನಾ ಹರಡು ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅನವಶ್ಯಕವಾಗಿ ರಸ್ತೆಗಿಳಿದವರ ಮೇಲೆ ಪೊಲೀಸರ ಲಾಠಿ ಏಟು ಹೀಗಾಗಿ,ಪೊಲೀಸರ ಲಾಠಿ ಚಾರ್ಜ್‌ಗೆ ಹೆದರಿದ ಬೈಕ್ ಸವಾರ್ ಬೋರ್ಡ್ ಹಿಡಿದುಕೊಂಡೇ ಬೆಳಗಾವಿ ತಲುಪಿದ್ದಾನೆ.

ಲಾಠಿ ರುಚಿಯಿಂದ ತಪ್ಪಿಸಿಕೊಳ್ಳಲು ಗಾಯಾಳು ಬೈಕ್ ಸವಾರನ ಪ್ಲಾನ್ ಪೊಲಿಸರು ಲಾಠಿ ಹಿಡಿದು ಬರುತ್ತಿದ್ದಂತೆ ನಾಮಫಲಕ ಹಿಡಿದು ಮನವಿ ಮಾಡುತ್ತ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾನೆ.

‘ನಾಯಿ ಕಚ್ಚಿದೆ ಆಸ್ಪತ್ರೆಗೆ ಹೋಗುತ್ತಿದ್ದೇವೆ ದಯವಿಟ್ಟು ಬಿಡಿ’ ಹೀಗೆಂದು ಕನ್ನಡದಲ್ಲಿ ಬರೆದ ನಾಮಫಲಕ ಹಿಡಿದ ಹಿಂಬದಿ ಸವಾರಬೆಳಗಾವಿ ಬೋಗಾರವೇಸ್ ಸರ್ಕಲ್ ನಲ್ಲಿ ಬೈಕ್ ಸವಾರನ ವಿನೂತನ ಬೇಡಿಕೆ ಖಾನಾಪೂರ ದಿಂದ ಬಂದಿರುವ ವ್ಯಕ್ತಿಗೆ ಸರಿಯಾಗಿ ಕನ್ನಡ ಮಾತನಾಡಲು ಬಾರದ ಹಿನ್ನೆಲೆಯಲ್ಲಿ ಪೋಲೀಸರು ಎಲ್ಲೆಲ್ಲಿ ವಿಚಾರಿಸುತ್ತಾರೋ ಅಲ್ಲಲ್ಲಿ ಆತ ಈ ಬೋರ್ಡ ತೋರಿಸಿದ್ದಾನೆ.

ಕನ್ನಡದಲ್ಲಿ ನಾಮಫಲಕ ಬರೆಸಿಕೊಂಡು ಬೆಳಗಾವಿಗೆ ಎಂಟ್ರಿ ಕೊಟ್ಟ ಸವಾರನ
ನಾಮಫಲಕ ಹಿಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆತ ಜಿಲ್ಲಾ ಆಸ್ಪತ್ರೆಗೆ ತಲುಪಿ ಚಿಕಿತ್ಸೆ ಪಡೆದಿದ್ದಾನೆ.

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *