ಕ್ಷಮೆ ಕೇಳಲು ಬಂದವ,ಕೊಲೆಗಾರನಾದ…!!

ಚಿಕ್ಕೋಡಿ-ಅನುಮಾನ ಎನ್ನುವ ರೋಗಕ್ಕೆ ಯಾವುದೇ ಔಷಧೀಯೇ ಇಲ್ಲ.ಅನುಮಾನದ ಭೂತಕ್ಕೆ ಭಾವನ ಕತ್ತು ಸೀಳಿ ಬಾಮೈದ ಕೊಲೆ ಮಾಡಿರವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ

ಪಟ್ಟಣದ ವಿದ್ಯಾನಗರ ನಿವಾಸಿ ಮಾಜಿ ಯೋಧ ಈರಗೌಡ ಟೋಪಗೋಳ(45) ಕೊಲೆಯಾದ ದುರ್ದೈವಿ ನಿನ್ನೆ ಸಂಜೆ ಚಿಕ್ಕೋಡಿಯ ವಿಧ್ಯಾ ನಗರದಲ್ಲಿ ಕತ್ತು ಸೀಳಿ ಮಾಜಿ ಯೋಧನ ಬರ್ಬರ ಹತ್ಯೆ ಮಾಡಲಾಗಿದೆ. ಮಾಜಿ ಯೋಧ ರನ್ನು ಸ್ವಂತ ಬಾಮೈದ ಸಂಜಯ್ ಬಾಕರೆ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಮರ್ಡರ್ ಕಹಾನಿ ಹೀಗಿದೆ.

ತನ್ನ ಪತ್ನಿಯ ಜೊತೆ ತನ್ನ ತಂಗಿಯ ಗಂಡ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಭೂತ ಸಂಜಯ್ ತಲೆಯೊಳಗೆ ಹೊಕ್ಕಿತ್ತು. ಇದಕ್ಕಾಗಿಯೇ ಕಳೆದ ಹದಿನೈದು ದಿನಗಳ ಹಿಂದೆ ಗಲಾಟೆಯೂ ಆಗಿತ್ತಂತೆ. ಬಳಿಕ ನಿನ್ನೆ ತನ್ನ ತಂಗಿಗೆ ಫೋನ್ ಮಾಡಿದ್ದ ಆರೋಪಿ ಸಂಜಯ್ ಬಾವನ ಮೇಲೆ ಅನುಮಾನ ಪಟ್ಟು ನಾನು ತಪ್ಪು ಮಾಡಿಬಿಟ್ಟೆ. ಮನೆಗೆ ಬಂದು ಬಾವನ ಕಾಲು ಬಿದ್ದು ಕ್ಷಮೆ ಕೇಳುತ್ತೇನೆ. ನೀವಿಬ್ಬರೂ ಸುಖವಾಗಿರಿ ಅಂದಿದ್ದನಂತೆ. ನೀನು ನಮ್ಮ ಮನೆಗೆ ಬರಬೇಡ ಅಂತಾ ತಂಗಿ ಹೇಳಿದರೂ ನಿನ್ನೆ ಸಂಜೆ ಮನೆಗೆ ಬಂದಿದ್ದ ಆರೋಪಿ ಸಂಜಯ್ ಹುಚ್ಚನ ರೀತಿ ವರ್ತಿಸಲು ಶುರು ಮಾಡಿದ್ದನಂತೆ. ಗಂಡ ಹಾಗೂ ಅಣ್ಣನಿಗೆ ಚಹಾ ಮಾಡಿ ಕೊಟ್ಟ ಕೊಲೆಯಾದ ಈರಗೌಡನ ಪತ್ನಿ ಸಂಗೀತಾ ಮನೆಯ ಹೊರಗೆ ಇದ್ದ ತನ್ನ ದಿವ್ಯಾಂಗ ಮಗನಿಗೆ ಚಹಾ ನೀಡಲು ಹೋಗಿದ್ದಾಳೆ. ಈ ವೇಳೆ ಈರಗೌಡನನ್ನು ಹಿಂಬದಿಯಿಂದ ಕತ್ತು ಹಿಡಿದು ಕೈಯಲ್ಲಿದ್ದ ಚಾಕುವಿನಿಂದ ಕತ್ತು ಸೀಳಿ ಪರಾರಿಯಾಗಿದ್ದಾನೆ.

ಇನ್ನು ಹೊಂಡಾ ಆ್ಯಕ್ಟೀವಾದಲ್ಲಿ ಬಾವ ಈರಗೌಡ ಮನೆಗೆ ಬಂದಿದ್ದ ಬಾಮೈದ ಕೊಲೆ ಮಾಡಿದ ಬಳಿಕ ತನ್ನ ದ್ವಿಚಕ್ರವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಈರಗೌಡ ಪತ್ತೆಗೆ ಬಲೆ ಬೀಸಿದ್ದಾರೆ. ಏರಿಯಾದಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದು ಆರೋಪಿಯ ಪತ್ತೆಗೆ ಎರಡು ಪ್ರತ್ಯೇಕ ತಂಡ ರಚಿಸಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *