Breaking News

ದೋಸಾ ತಿನ್ನಲು ಹೋಗಿ ಎಂಟು ಲಕ್ಷ ಲಾಸು…ದೂರು ಕೊಟ್ಟ ಬಾಸು…!!!

ಬೆಳಗಾವಿ- ಮಹಾಲಿಂಗಪೂರದ ಚಿನ್ನದ ವ್ಯಾಪಾರಿಯೊಬ್ಬ ಚಿನ್ನ ಖರೀದಿಸಲು ಬೆಳಗಾವಿಗೆ ಬಂದಾಗ ಕಾರು ನಿಲ್ಲಿಸಿ ದೋಸಾ ತನ್ನಲು ಹೊಟೇಲ್ ಗೆ ಹೋದಾಗ ಕಾರಿನ ಗಾಜು ಒಡೆದು ಆರುವರೆ ಲಕ್ಷ ನಗದು ಒಂದುವರೆ ಲಕ್ಷ ಮೌಲ್ಯದ ಚಿನ್ನ ದೋಚಿದ ಘಟನೆ ಬೆಳಗಾವಿಯ ವಡಗಾಂವ ಪ್ರದೇಶದಲ್ಲಿ ನಡೆದಿದೆ

ಮಹಾಲಿಂಗಪೂರದ ಚಿನ್ನದ ವ್ಯಾಪಾರಿ ಮಲ್ಲಪ್ಪ ಸಂಗಪ್ಪ ಸೋನಾರ್ ಎಂದಿನಂತೆ ಚಿನ್ನ ಖರೀಧಿ ಮಾಡಲು ಬೆಳಗಾವಿಗೆ ಬಂದಿದ್ದರು ವಡಗಾವಿಯ ಯಳ್ಳೂರ ರಸ್ತೆಯಲ್ಲಿರುವ ದಿವೇಶ್ವರ ಮಂದಿರದ ಬಳಿ ಕಾರು ನಿಲ್ಲಿಸಿ ದೋಸಾ ತಿನ್ನಲು ಹೊಟೇಲ್ ಗೆ ಹೋದ ಸಂದರ್ಭದಲ್ಲಿ ಕಾರಿನ ಗಾಜು ಒಡೆದು ಆರು ಲಕ್ಷ 32 ಸಾವಿರ ರೂ ನಗದು ಹಣ ಹಾಗು ಒಂದು ಲಕ್ಷ 52 ಸಾವಿರ ರೂ ಬೆಲೆಯ ಚಿನ್ನವನ್ನು ದೋಚಲಾಗಿದೆ

ಮಲ್ಲಪ್ಪ ಸಂಗಪ್ಪ ಸೋನಾರ್ ಚಿನ್ನದ ವ್ಯಾಪಾರಿಯಾಗಿದ್ದು ಶಹಾಪೂರ ಠಾಣೆಯಲ್ಲಿ ದೂರು ನೀಡಿದ್ದಾರೆ

Check Also

ಶ್ರೀ ಮಹಾಲಕ್ಷ್ಮೀ ಜಾತ್ರೆ, ಭಂಡಾರ ಇಲ್ಲ….,ಬ್ಯಾನರ್ ಕೂಡಾ ಬ್ಯಾನ್….!!!

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ …

Leave a Reply

Your email address will not be published. Required fields are marked *