Breaking News

ರಜೆ ನೀಡದ ಮಾಲೀಕನನ್ನೇ ಮಟ್ಯಾಶ್ ಮಾಡಿದ ಕಿರಾತಕರು….

ರಜೆ ನೀಡದ ಮಾಲೀಕನ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಕಾರ್ಮಿಕರು

ಬೆಳಗಾವಿ-:ಬೈಲಹೊಂಗಲ ತಾಲ್ಲೂಕಿನಲ್ಲಿ ಕಲ್ಟಿವೇಟರ್ ಯಂತ್ರದ ಮೂಲಕ ಕಬ್ಬಿನ ಕಟಾವ್ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಚೂರಿಯಿಂದ ತಮ್ಮ ಮಾಲೀಕನ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಘಟನೆ ಬೈಲಹೊಂಗಲ ತಾಲ್ಲೂಕಿನ ಕೋರಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಕೊಲ್ಹಾಪೂರ ಜಿಲ್ಲೆಯ ಪನ್ಹಾಳ ತಾಲ್ಲೂಕು ಮಜಗಾಂವ ಗ್ರಾಮದ ಪ್ರಕಾಶ ರಾಮಚಂದ್ರ ಮಗದುಮ್ (40) ಎಂದು ಗುರುತಿಸಲಾಗಿದೆ.

ಆರೋಪಿಗಳಾದ ಮಹಾರಾಷ್ಟ್ರದ ದತ್ತಾ ಪಾಟಕರ ಮತ್ತು ಸೈಲಾದ್ ಪಾಟಕರ್ ಪರಾರಿಯಾಗಿದ್ದಾರೆ.

ಆರೋಪಿತರಾದ ದತ್ತಾ ಪಾಟಕರ ಮತ್ತು ಸೈಲಾದ ಪಾಟಕರ ಅವರು ಹತ್ಯೆಯಾದ ಪ್ರಕಾಶ ಮಗದುಮ್ ಗೆ ಸೇರಿದ ಕಬ್ಬಿನ ಕಟಾವ್ ಮಾಡುವ ಕಲ್ಟಿವೇಟರ್ ಯಂತ್ರ ಮತ್ತು ಟ್ರ್ಯಾಕ್ಟರ್ ನಡೆಸುತ್ತಿದ್ದರು ಹಲವಾರು ದಿನಗಳಿಂದ ಈ ಇಬ್ಬರು ಚಾಲಕರು ತಮಗೆ ರಜೆ ನೀಡುವಂತೆ ಮಾಲೀಕನಿಗೆ ಮನವಿ ಮಾಡಿದರೂ ಮಾಲೀಕ ಪ್ರಕಾಶ ರಜೆ ನೀಡದ ಕಾರಣ ಇಬ್ಬರು ಚಾಲಕರು ಇಂದು ಬೆಳಗಿನ ಜಾವ ಮಾಲೀಕನಿಗೆ ತಿಳಿಸದೇ ತಮ್ಮ ಊರಿಗೆ ತೆರಳುತ್ತಿರುವಾಗ ಮಾಲೀಕನಿಗೆ ಈ ವಿಷಯ ತಿಳಿದು ತನ್ನ ಕಾರಿನಿಂದ ಹಿಂಬಾಲಿಸಿ ಕೋರಿಕೊಪ್ಪ ಬಳಿ ಇಬ್ಬರನ್ನು ಹಿಡಿದಿದ್ದಾನೆ

ಮಾಲೀಕನಿಗೆ ತಿಳಿಸದೇ ತಮ್ಮ ಊರಿಗೆ ಮರಳುತ್ತಿದ್ದ ಇಬ್ಬರನ್ನು ತಡೆದು ಕಾರಿನಲ್ಲಿ ಅವರನು ಮರಳಿ ಹೋಗುತ್ತಿರುವಾಗ ದತ್ತಾ ಪಾಟಕರ ಎಂಬಾತ ಮಾಲೀಕ ಪ್ರಕಾಶನ ಮೇಲೆ ಚೂರಿಯಿಂದ ಕುತ್ತಿಗೆ ಕೊಯ್ದು ಹಲವಾರು ಬಾರಿ ಚಾಕುವಿನಿಂದ ವಾರ್ ಮಾಡಿ ಪರಾರಿಯಾಗಿದ್ದಾನೆ.

ಕಾರಿನಲ್ಲಿದ್ದ ಧರ್ಮೇಂದ್ರ ಗಾವಡೆ ಮೇಲೂ ಹಲ್ಲೆ ಮಾಡಿದ್ದು ಧರ್ಮೇಂದ್ರ ಗಾಯಗೊಂಡಿದ್ದಾನೆ

ರಜೆ ಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ರಜೆ ನೀಡದ ಮಾಲೀಕನ ಹತ್ಯೆ ಮಾಡಿ ಇಬ್ಬರು ಪರಾರಿಯಾಗಿದ್ದು ದುರ್ದೈವದ ಸಂಗತಿ

ಬೈಲಹೊಂಗಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *